- Advertisement -
- Advertisement -
ಸುಳ್ಯ; ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದು ಖದೀಮನೊಬ್ಬ ಚಿನ್ನದ ಬಳೆ ಎಗರಿಸಿದ ಘಟನೆ ಸುಳ್ಯದ ರಥ ಬೀದಿಯ ಚೆನ್ನಕೇಶವ ಸಂಕೀರ್ಣದಲ್ಲಿರುವ ಜ್ಯುವೆಲ್ಲರಿ ಶಾಪ್ ನಲ್ಲಿ ನವಂಬರ್ 9 ರಂದು ನಡೆದಿದೆ.
ಚಿನ್ನದ ಅಂಗಡಿಗೆ ಬಂದ ಆತ ಆರಂಭದಲ್ಲಿ ಪರಿಚಿತನಂತೆ ಮಾತನಾಡಿ ಚಿನ್ನದ ಆಭರಣಗಳ ಕುರಿತಂತೆ ವಿಚಾರಿಸಿ ಬಳಿಕ ಐದು ಗ್ರಾಂ ತೂಕದ ಬೆಲೆಬಾಳುವ ಮಕ್ಕಳು ಧರಿಸುವ ಬಳೆಯನ್ನು ಎಗರಿಸಿದ್ದಾನೆ ಎನ್ನಲಾಗಿದೆ. ಸಿಸಿಟಿವಿ ದೃಶ್ಯ ಆಧಾರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -