ಉಡುಪಿಯಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯೊಬ್ಬ ತನ್ನದೇ ಗ್ಯಾಂಗ್ ವಿರುದ್ಧ ಗ್ಯಾಂಗ್ ವಿರುದ್ಧ ದೂರು ನೀಡಿದ್ದಾನೆ.
ಬಂಧಿತ ಗರುಡ ಗ್ಯಾಂಗ್ ನ ಸದಸ್ಯ ಮಹಮ್ಮದ್ ಸಕ್ಲೈನ್ ಎಂಬಾತ ಶರೀಫ್, ಅಲ್ಫಾಜ್, ಮಜೀದ್ ವಿರುದ್ಧ ದೂರು ದಾಖಲಿಸಿದ್ದು. ಕಾರು ಅಡ್ಡ ಹಾಕಿ ತಲವಾರು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.,
ಈ ನಡುವೆ ಉಡುಪಿ ನಗರ ಠಾಣೆ ಇನ್ ಸ್ಪೆಕ್ಟರ್ ಶ್ರೀಧರ ವಸಂತ ಸತಾರೆ ಅವರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಗರುಡಾ ಗ್ಯಾಂಗ್ ನ ಗಲಾಟೆಯ ವೈರಲ್ ಆದ ಒಂದುವರೆ ನಿಮಿಷದ ವಿಡಿಯೋ ಆಧಾರದಲ್ಲಿ ದೂರು ದಾಖಲಾಗಿದೆ.
ಇನ್ನು ಗ್ಯಾಂಗ್ ವಾರ್ ನಲ್ಲಿ ಗಾಯಗೊಂಡ ಮಹಮ್ಮದ್ ಶರೀಫ್ ನಿಂದ ಕೂಡ ಎಫ್ಐಆರ್ ದಾಖಲಾಗಿದೆ. ಈತ ತನ್ನದೇ ಗ್ಯಾಂಗ್ ನ ಆಶಿಕ್ ವಿರುದ್ಧ ದೂರು ನೀಡಿದ್ದಾರೆ. ಆಶಿಕ್ ಬಗ್ಗೆ ಪೊಲೀಸರಿಗೆ ಶರೀಫ್ ಮಾಹಿತಿ ನೀಡಿದ್ದಾಗಿ ಆರೋಪಿಸಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಪೊಲೀಸರು ಆಶಿಕ್ ನನ್ನು ಹುಡುಕುತ್ತಿದ್ದಾರೆ.