ಆಂಧ್ರಪ್ರದೇಶ: ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಫೇಸ್ಬುಕ್ ಮೂಲಕವೇ ಸ್ನೇಹಿತನೊಬ್ಬ ಕಾಪಾಡಿದ ಘಟನೆ ಆಂಧ್ರ ಪ್ರದೇಶ ಅನಂತಪುರದಲ್ಲಿ ನಡೆದಿದೆ.
ಸತೀಶ್ ಎಂಬಾತ ತನ್ನ ಫೇಸ್ಬುಕ್ ಸ್ನೇಹಿತ ಅನ್ನಪೂರ್ಣ ಸೇವಾ ಸಮಿತಿ ಸಂಸ್ಥಾಪಕ ಮಹಾಕಾಳಿ ಪ್ರಕಾಶ್ ಎಂಬುವರಿಗೆ ಶನಿವಾರ ಮಧ್ಯಾಹ್ನ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ.
ಬಳಿಕ ಪ್ರಕಾಶ್ ಸಾಕಷ್ಟು ಬಾರಿ ಸತೀಶ್ಗೆ ಕರೆ ಮಾಡಿದರೂ ಉತ್ತರಿಸದಿದ್ದಾಗ ತಕ್ಷಣ ಪ್ರಕಾಶ್, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಇದಕ್ಕೆ ತಕ್ಷಣ ಸ್ಪಂದಿಸಿದ ಪೊಲೀಸರು ತಾಂತ್ರಿಕ ಸಹಾಯದಿಂದ ಸತೀಶ್ 10 ಕಿ.ಮೀ ಅಂತರದಲ್ಲಿ ಮೆಸೇಜ್ ಮಾಡಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು ಆ ಸ್ಥಳವನ್ನು ಗುರುತಿಸಿದ್ದಾರೆ.
ಪೊಲೀಸರು ಹೋದಾಗ ಸತೀಶ್ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಯ ಮೇಲೆ ಮಲಗಿದ್ದ.. ಇದನ್ನು ನೋಡಿದ ಪೊಲೀಸರು ಸತೀಶ್ನನ್ನು ರಕ್ಷಿಸಿದ್ದಾರೆ. ಇನ್ನು ಏಳು ನಿಮಿಷಗಳಲ್ಲಿ ರೈಲು ಬರುವ ಸಾಧ್ಯತೆಯು ಇತ್ತು. ಆದರೆ, ಅಷ್ಟರಲ್ಲಾಗಲೇ ಆತನ ಜೀವವನ್ನು ಪೊಲೀಸರು ಉಳಿಸಿದ್ದಾರೆ.