- Advertisement -
- Advertisement -
ಮಲ್ಪೆಯ ಮೂಡಬೆಟ್ಟು ನಿವಾಸಿ ರವೀಂದ್ರ ಎನ್ ಕೋಟ್ಯಾನ್ ಅವರಿಗೆ ಸೀ ಫುಡ್ ಸಂಸ್ಥೆಯಲ್ಲಿ ಪಾಲುದಾರರನ್ನಾಗಿ ಮಾಡುತ್ತೇವೆಂದು ನಂಬಿಸಿ , ಐದು ಲಕ್ಷ ಹಣ ಪಡೆದು ವಂಚಿಸಿರುವುದಾಗಿ ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2020 ರ ಜೂ .18 ರಂದು ಇವರಿಗೆ ಅಭಿಲಾಷ್ , ರಾಜೀವ್ ಕುಮಾರ್ , ಮಧುಕರ ಭೋಜ ಸುವರ್ಣ ಎನ್ನುವವರು ಮರಿಯಂ ಸೀಫುಡ್ ನಲ್ಲಿ ಹಣ ತೊಡಗಿಸುವಂತೆ ಹೇಳಿ ಹೆಚ್ಚಿನ ಲಾಭ ಸಿಗುತ್ತೆ ಎನ್ನುವುದಾಗಿ ನಂಬಿಸಿ ಬ್ಯಾಂಕ್ ಖಾತೆ ಮೂಲಕ ಐದು ಲಕ್ಷ ರೂಪಾಯಿಯನ್ನು ವರ್ಗಾಯಿಸಿಕೊಂಡಿದ್ದರು.
ಆ ಬಳಿಕ ನೆಪ ಹೇಳಿ ಅರೋಪಿತರು ತಪ್ಪಿಸಿಕೊಳ್ಳುತ್ತಿದ್ದು , ತಾವು ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದೆ. ಮಲ್ಪೆ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ .
- Advertisement -