- Advertisement -
- Advertisement -
ಮಂಗಳೂರು: ನನ್ನ ಸಿಡಿ ತಯಾರಿಸಿದ್ದ ಮಹಾನ್ ನಾಯಕನೇ ಇದರಲ್ಲೂ ಭಾಗಿ ಆಗಿದ್ದಾರೆ. ನನ್ನ ಸಿಡಿ ತಯಾರಿಸಿದ ಟೀಂನವರೇ ಇದರಲ್ಲೂ ಷಡ್ಯಂತ್ರ ಮಾಡಿದ್ದಾರೆ. ಹೀಗಾಗಿ ಸಂತೋಷ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಲಿ. ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ನೀಡಬಾರದು ಎಂದು ಹೇಳಿಕೆ ನೀಡಿರುವ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಮಾಜಿ ಸಚಿವ ಅಭಯಚಂದ್ರ ಜೈನ್ ಕಿಡಿಕಾರಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಅವನ ಗುಣಗಾನದ ಬಗ್ಗೆ ನಮಗೆ ಗೊತ್ತಿದೆ. ರೇಪ್ ಕೇಸ್ ನಲ್ಲಿ ಸಿಲುಕಿದ ಆತನ ಹಣೆಬರಹ ದೇಶದಲ್ಲಿ ಬಯಲಾಗಿದೆ. ಆತನಗೆ ಬೆಲೆ ಇಲ್ಲ ಎಂದು ನಾನು ನೇರವಾಗಿ ಹೇಳ್ತೀನಿ. ಆತನಿಗೆ ಮಾಧ್ಯಮದವ್ರ ಎದುರು ನಿಲ್ಲೊಕೇ ಯೋಗ್ಯತೆ ಇಲ್ಲ. ಆತ ಈಗ ಮಂತ್ರಿಗಿರಿ ಕೇಳ್ತಿದ್ದಾನೆ, ನಾಚಿಕೆ ಆಗ್ಬೇಕು ಎಂದು ಕಿಡಿಕಾರಿದ್ರು.
- Advertisement -