- Advertisement -
- Advertisement -
ಬೆಂಗಳೂರು: ಬೆಂಗಳೂರಿನ ಸಂಪಿಗೆ ಹಳ್ಳಿಯ ಶಿವರಾಮ ಕಾರಂತ ಬಡಾವಣೆ ಪಾರ್ಕ್ ಬಳಿಯಲ್ಲಿ ಬೆತ್ತಲಾಗಿ ಓಡಾಡುತ್ತಿದ್ದ ನೈಜೀರಿಯನ್ ಪ್ರಜೆಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಹೆಣ್ಣೂರು ಕ್ರಾಸ್ ನಿವಾಸಿ ಜೇಮ್ಸ್ ಎನ್ನಲಾಗಿದೆ.
ಭಾನುವಾರ ಮುಂಜಾನೆ ಸುಮಾರಿಗೆ ನೈಜೀರಿಯಾ ಮೂಲದ ಈ ವ್ಯಕ್ತಿಯು ಪಾರ್ಕ್ ಬಳಿ ಬೆತ್ತಲಾಗಿ ಓಡಾಡುತ್ತಿದ್ದ. ಈತನ ಅಸಭ್ಯವರ್ತನೆಯನ್ನು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಲು ಯತ್ನಿಸಿದಾಗ ಆತ ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಹಲ್ಲೆ ವಿರುದ್ಧ ಜೇಮ್ಸ್ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಪೇದೆ ಶ್ರೀನಿವಾಸ ಮೂರ್ತಿ ದೂರು ನೀಡಿದ್ದಾರೆ.
- Advertisement -