- Advertisement -
- Advertisement -
ಉಡುಪಿ: ಕರಾವಳಿಯ ಪ್ರವಾಸಿ ತಾಣದಲ್ಲಿ ಈಗ ತೇಲುವ ಸೇತುವೆ ಗಮನ ಸೆಳೆಯುತ್ತಿದೆ. ರಾಜ್ಯದಲ್ಲೇ ಮೊದಲ ಫ್ಲೋಟಿಂಗ್ ಬ್ರಿಡ್ಜ್ ಉಡುಪಿಯಲ್ಲಿ ಆರಂಭವಾಗಿದೆ.
ಪ್ರವಾಸಿ ತಾಣ ಮಲ್ಪೆ ಕಡಲ ಕಿನಾರೆಯಲ್ಲಿ ತೇಲುವ ಸೇತುವೆ ಆರಂಭವಾಗಿದ್ದು, ಶಾಸಕ ರಘುಪತಿ ಭಟ್ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತೇಲುವ ಸೇತುವೆ ಅನಾವರಣ ಮಾಡಿದ್ದಾರೆ. ಶಾಸಕ ರಘುಪತಿ ಭಟ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇತುವೆ ಮೇಲೆ ತೇಲುವ ಅನುಭವ ಪಡೆದಿದ್ದು, ನಡೆದುಕೊಂಡು ಹೋಗುತ್ತಲೇ ಶಾಸಕ ರಘುಪತಿ ಭಟ್ ಬಿದ್ದಿದ್ದಾರೆ.
ರಾಜ್ಯದಲ್ಲೇ ಮೊದಲ ತೇಲುವ ಸೇತುವೆಯ ಅನುಭವ ಪಡೆದು ಉಡುಪಿಯ ಜನತೆ ಖುಷಿ ಪಟ್ಟಿದ್ದು, 80 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆ ಆಮದು ಮಾಡಿಕೊಳ್ಳಲಾಗಿದೆ.
- Advertisement -