- Advertisement -
- Advertisement -
ಲಕ್ನೋ : ಎನ್ ಕೌಂಟರ್ ಗೆ ಬಲಿಯಾದ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯ ಬಗ್ಗೆ ಮೊದಲ ಬಾರಿಗೆ ಆತನ ಪತ್ನಿ ರಿಚಾ ದುಬೆ ಮಾತನಾಡಿದ್ದಾರೆ. ಆಕೆಯ ಮಾತುಗಳನ್ನು ಕೇಳಿದ್ರೆ ಆಕೆಗೆ ವಿಕಾಸ್ ದುಬೆಯ ಮೇಲೆ ಎಷ್ಟರಮಟ್ಟಿಗೆ ಕೋಪಿವಿತ್ತು ಅನ್ನೋದು ಗೊತ್ತಾಗುತ್ತೆ.
ಇದೀಗ ಮೊದಲ ಬಾರಿಗೆ ಮಾಧ್ಯಮ ಮುಂದೆ ಆಕೆ ಮಾತನಾಡಿದ್ದಾರೆ. ಪೊಲೀಸರನ್ನು ಅಮಾನುಷವಾಗಿ ಕೊಂದಿದ್ದಕ್ಕೆ ನಾನೇ ನನ್ನ ಪತಿ ವಿಕಾಸ್ ದುಬೆಯನ್ನು ಕೊಲ್ಲಬೇಕು ಎಂದುಕೊಂಡಿದ್ದೆ ಎಂದು ಗ್ಯಾಂಗ್ಸ್ಟರ್ ವಿಕಾಸ್ ದುಬೆ ಪತ್ನಿ ರಿಚಾ ದುಬೆ ಹೇಳಿದ್ದಾರೆ.
ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ಬಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವೇಳೆ ಪೊಲೀಸರ ಮೇಲೆ ದುಬೆ ಮತ್ತು ಅವನ ಸಹಚರರು ಗುಂಡಿನ ಮಳೆ ಸುರಿಸಿದ್ದರು. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು.
- Advertisement -