- Advertisement -
- Advertisement -
ಉಜಿರೆ: ಮೊನ್ನೆಯಷ್ಟೇ ಭಾರೀ ಬೆಂಕಿಅನಾಹುತ ಸಂಭವಿಸಿದ ಬೆನ್ನಲ್ಲೇ ಉಜಿರೆಯಲ್ಲಿ ತರಕಾರಿ ಅಂಗಡಿ ಮತ್ತು ಬೆಡ್ ಮಾರ್ಟ್ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಜನಾರ್ದನ ದೇವಸ್ಥಾನದ ದ್ವಾರದ ಪಕ್ಕದಲ್ಲಿರುವ ಯು.ಎ.ಹಮೀದ್ ಎಂಬವರಿಗೆ ಸೇರಿದ ಬೆಡ್ ಮಾರ್ಟ್ ಹಾಗೂ ತರಕಾರಿ ಅಂಗಡಿಗೆ ಇಂದು ಸುಮಾರು 11:30 ರ ಸಮಯಕ್ಕೆ ಬೆಂಕಿ ತಗುಲಿದೆ. ಈ ವೇಳೆ ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು ನಂತರ ಎರಡು ಅಗ್ನಿಶಾಮಕ ದಳ ಬಂದು ಬೆಂಕಿ ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ವಾಹನಗಳು ಹಾಗು ಸಾರ್ವಜನಿಕರು ಸೇರಿದ್ದರಿಂದ ವಸಂಚಾರಕ್ಕೆ ಅಡಚಣೆ ಆಗಿದ್ದು ತಕ್ಷಣ ಸ್ಥಳಕ್ಕೆ ಬಂದ ಬೆಳ್ತಂಗಡಿ ಪೊಲೀಸರು ಹಾಗೂ ಸಂಚಾರಿ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಿದರು.
- Advertisement -