Saturday, April 27, 2024
Homeಕರಾವಳಿಉಡುಪಿಕಾರ್ಕಳ; ಆಕಸ್ಮಿಕ ಬೆಂಕಿ‌ ಅನಾಹುತಕ್ಕೆ ಸುಟ್ಟು ಕರಕಲಾದ ಮೇಣದ ಬತ್ತಿ ತಯಾರಿಕಾ ಘಟಕ

ಕಾರ್ಕಳ; ಆಕಸ್ಮಿಕ ಬೆಂಕಿ‌ ಅನಾಹುತಕ್ಕೆ ಸುಟ್ಟು ಕರಕಲಾದ ಮೇಣದ ಬತ್ತಿ ತಯಾರಿಕಾ ಘಟಕ

spot_img
- Advertisement -
- Advertisement -

ಕಾರ್ಕಳ  ; ಆಕಸ್ಮಿಕ ಬೆಂಕಿ‌ ಅನಾಹುತ ಸಂಭವಿಸಿ
ಮೇಣದ ಬತ್ತಿ ತಯಾರಿಕಾ ಘಟಕ  ಸುಟ್ಟು ಭಸ್ಮವಾದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ಪರ್ಪಲೆಗುಡ್ಡೆ ಎಂಬಲ್ಲಿ ನಡೆದಿದೆ. ಘಟನೆಯಿಂದ ಸುಮಾರು 25 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಅತ್ತೂರು ಚರ್ಚಿಗೆ ಸೇರಿದ್ದ ಪರ್ಪಲೆ ಗುಡ್ಡದಲ್ಲಿರುವ ಮೇಣದ ಬತ್ತಿ ತಯಾರಿಕಾ ಘಟಕದ ಇಡೀ ಕಟ್ಟಡ, ಯಂತ್ರೋಪಕರಣಗಳು ಹಾಗೂ ಮೇಣದ ಬತ್ತಿ ತಯಾರಿಕೆಗೆ ದಾಸ್ತಾನು ಇರಿಸಲಾಗಿದ್ದ ಅಪಾರ ಪ್ರಮಾಣದ ಮೇಣ ಹಾಗೂ ಉತ್ಪಾದನೆಯಾಗಿದ್ದ ಮೇಣದ ಬತ್ತಿಗಳು ಅಗ್ನಿಗೆ ಆಹುತಿಯಾಗಿವೆ

ನಿನ್ನೆ ಸಾಯಂಕಾಲ ಏಕಾಎಕಿ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಘಟಕವನ್ನು ವ್ಯಾಪಿಸಿದೆ. ತಕ್ಷಣವೇ ಎರಡು ಅಗ್ನಿಶಾಮಕ ದಳದ ವಾಹನಗಳು ಘಟನಾ ಸ್ಥಳಕ್ಕೆ ಬಂದು ಬೆಂಕಿನಂದಿಸಲು  ಮುಂದಾದಾಗ ಘಟಕ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!