Sunday, May 5, 2024
Homeಕರಾವಳಿಬೆಳ್ತಂಗಡಿ: ನೀರಿನ ವಿಚಾರದಲ್ಲಿ ತಕರಾರು: ವ್ಯಕ್ತಿಯ ಕೈಗೆ ಕಡಿದ ಆರೋಪಿ

ಬೆಳ್ತಂಗಡಿ: ನೀರಿನ ವಿಚಾರದಲ್ಲಿ ತಕರಾರು: ವ್ಯಕ್ತಿಯ ಕೈಗೆ ಕಡಿದ ಆರೋಪಿ

spot_img
- Advertisement -
- Advertisement -

ಬೆಳ್ತಂಗಡಿ: ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತಕರಾರು ನಡೆದು ವ್ಯಕ್ತಿಯ ಕೈಗೆ ಕಡಿದ ಘಟನೆ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ  ಗ್ರಾಮದ ಹೇಡ್ಯಾ ಎಂಬಲ್ಲಿ ನಡೆದಿದೆ.

ಹೇಡ್ಯಾ ನಿವಾಸಿಗಳಾದ  ಲೂಯಿಸ್ ಹಾಗೂ ವಾಸು ಗೌಡ ಎಂಬವರ ಗೌಡರವರಿಗೆ ಅರಣ್ಯದಲ್ಲಿ ಕುಡಿಯುವ ನೀರಿನ ಗುಂಡಿಯ ವಿಚಾರದಲ್ಲಿ  ತಕರಾರಿತ್ತು. ದಿನಾಂಕ 04.05.2022 ರಂದು ವಾಸು ಗೌಡರವರು ಲೂಯಿಸ್ ಮನೆಗೆ ಬರುವ ಕುಡಿಯುವ ನೀರಿನ ಪೈಪ್ ನ್ನು ತುಂಡು ಮಾಡಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ಲೂಯಿಸ್ ದೂರು ನೀಡಿದ್ದರು.

ನಿನ್ನೆ ಸಂಜೆ  08.05.2022 ರಂದು ಸಂಜೆ 4.00 ಗಂಟೆ ಸುಮಾರಿಗೆ ಲೂಯಿಸ್ ಮಲ್ಲಡ್ಕ ಎಂಬಲ್ಲಿ  ರಸ್ತೆ ಬದಿಯಲ್ಲಿ  ನಿಂತುಕೊಂಡಿರುವಾಗ ಆರೋಪಿ ವಾಸು ಗೌಡರವರು ಬಂದಿದ್ದಾರೆ,. ಬಂದು ಲೂಯಿಸ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನೀನು ಬಾರಿ ಕಂಪ್ಲೇಂಟ್ ಕೊಡುತ್ತೀಯಾ” ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳುತ್ತಾ ಕೊಕ್ಕೆ ಕತ್ತಿಯಿಂದ ಲೂಯಿಸ್ ಅವರ ಎಡ ಕೈ ರಟ್ಟೆ ಹಾಗೂ ಎಡ ಕೈ ಬೆರಳಿಗೆ ಕಡಿದಾಗ ಲೂಯಿಸ್ ತಪ್ಪಿಸಲು ಬಲ ಕೈ ಅಡ್ಡ ಹಿಡಿದಾಗ ಕತ್ತಿಯು ಬಲ ಕೈ ಅಂಗೈಗೆ ತಾಗಿದೆ. ಇದರಿಂದ ಲೂಯಿಸ್ ಗಾಯಗೊಂಡಿದ್ದಾರೆ. ಆಗ ಈ ಬಾರಿ ನೀನು ಬಚಾವ್ ಆಗಿದ್ದಿ. ಮುಂದಕ್ಕೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ವಾಸುದೇವ ಗೌಡ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!