- Advertisement -
- Advertisement -
ಸುಳ್ಯ; ಅಡಿಕೆ ಕೊಯ್ಯುವ ಕತ್ತಿಯಿಂದ ಅಣ್ಣನೊಬ್ಬ ತಮ್ಮನ ಮೇಲೆ ಹಲ್ಲೆ ಮಾಡಿರುವ ಘಟನೆ ಮುಳ್ಯ ಅಟ್ಲೂರು ಎಂಬಲ್ಲಿ ನಡೆದಿದೆ.
ಕಳೆದ ಕೆಲವು ಸಮಯಗಳಿಂದ ಜಾಗದ ವಿಷಯದಲ್ಲಿ ಅಣ್ಣ –ತಮ್ಮಂದಿರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ . ಭಾನುವಾರದಂದು ಅಣ್ಣ ಲವ್ ಕುಮಾರ್ ಹಾಗೂ ತಮ್ಮ ರವಿಚಂದ್ರ ಮಧ್ಯೆ ಮಾತಿಗೆ ಮಾತು ಬೆಳೆದು ಅಣ್ಣ ಅಡಿಕೆ ಕೊಯ್ಯುವ ಗಳೆಯ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.
ಈ ವೇಳೆ ತಮ್ಮ ರವಿಚಂದ್ರ ಅವರ ಎದೆ ಮತ್ತು ಭುಜಕ್ಕೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -