ಮಂಗಳೂರು: ಉಳ್ಳಾಲದಿಂದ ವರದಿಯಾಗಿರುವ ಹೃದಯ ವಿದ್ರಾವಕ ಘಟನೆಯಲ್ಲಿ, ತನ್ನ ಮಗಳ ಐದನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಯೋಜಿಸಿದ್ದ ವ್ಯಕ್ತಿಯೊಬ್ಬರು ಆಕೆಯ ಹುಟ್ಟುಹಬ್ಬದ ಒಂದು ವಾರ ಮುಂಚಿತವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಲ್ಯ ಕಣೀರುತೋಟ ಕಣೇರುಬೀಡು ನಿವಾಸಿ ಪ್ರವೀಣ್ ಪೂಜಾರಿ (34) ಎಂಬಾತನೇ ದಿಢೀರ್ ಪ್ರಾಣ ಕಳೆದುಕೊಂಡ ಯುವಕ.
ಪ್ರವೀಣ್ ಖಾಸಗಿ ಬಸ್ಸಿನ ಟಿಕೆಟ್ ಚೆಕ್ಕರ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಸಂಜೆ ಮನೆಗೆ ಮರಳಿದ ಬಳಿಕ ಕೋಣೆಗೆ ಬಂದಿದ್ದರು. ಅವನ ತಾಯಿ ಮನೆಯ ಹೊರಗೆ ಬೀಡಿ ಕಟ್ಟುತ್ತಿದ್ದರು. ಸಂಜೆ 7.30ಕ್ಕೆ ಪ್ರವೀಣ್ನ ಪತ್ನಿ ಕೆಲಸ ಮುಗಿಸಿ ಬಂದು ನೋಡಿದಾಗ ಪತಿ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಕೊನೆಯುಸಿರೆಳೆದಿದ್ದರು.
ಮುಂದಿನ ವಾರ ಮಗಳ ಐದನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಆಸೆಯನ್ನು ಪ್ರವೀಣ್ ಕುಟುಂಬ ಸದಸ್ಯರಿಗೆ ಪದೇ ಪದೇ ಹೇಳುತ್ತಿದ್ದರು ಎನ್ನಲಾಗಿದೆ. ಆದರೆ ಅದ್ಧೂರಿ ಹುಟ್ಟುಹಬ್ಬವನ್ನು ಏರ್ಪಡಿಸುವ ಬದಲು, ಅವರ ಜೀವನವನ್ನೇ ಕೊನೆಗೊಳಿಸಿದರು. ಇದಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.