- Advertisement -
- Advertisement -
ಸುಬ್ರಹ್ಮಣ್ಯ:ಸಾಲ ಬಾಧೆಯಿಂದ ಕೃಷಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಏನೆಕಲ್ಲಿನಲ್ಲಿ ನಡೆದಿದೆ. ಏನೆಕಲ್ಲು ಗ್ರಾಮದ ಕುಕ್ಕಪ್ಪನ ಮನೆ ಮೋಹನ ಕುಮಾರ್(51) ಆತ್ಮಹತ್ಯೆಗೆ ಶರಣಾದವರು.
ಮೋಹನ್ ಕುಮಾರ್ ಅವರು ಇತ್ತೀಚೆಗೆ ಮನೆ ನಿರ್ಮಾಣಕ್ಕಾಗಿ ಕೈ ಸಾಲ ಹಾಗೂ ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್ ಸಾಲಗಳನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ . ಮಾಡಿದ ಸಾಲವನ್ನು ತೀರಿಸಲಾಗದೇ ಇತ್ತೀಚೆಗೆ ಬೇಸರದಿಂದ ಇರುತ್ತಿದ್ದ ಎಂದು ಮೃತರ ಅಣ್ಣ ಭಾಸ್ಕರ .ಕೆ.ಎಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಡಿ12ರಂದು ಮುಂಜಾನೆ ಎಂದಿನಂತೆ ತೋಟಕ್ಕೆ ಹೋದವರು 9 ಗಂಟೆಯ ತನಕ ಮನೆಗೆ ಬಾರದೇ ಇದ್ದಾಗ ಮನೆಯವರು ಸೇರಿಕೊಂಡು ತೋಟದಲ್ಲಿ ಹುಡುಕಾಡಿದಾಗ ಹಲಸಿನ ಮರವೊಂದಕ್ಕೆ ನೇಣು ಬ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.ಈ ಬಗ್ಗೆ ಸುಬ್ರಹ್ಮಣ್ಯ ಠಾಣೆ ಯುಡಿಆರ್ ನಂಬ್ರ: 35/2023 ಕಲಂ: 174 ಸಿಆರ್ ಪಿಸಿ. ಯಂತೆ ಪ್ರಕರಣ ದಾಖಲಾಗಿದೆ.
- Advertisement -