Saturday, June 28, 2025
Homeತಾಜಾ ಸುದ್ದಿಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ತಂಡಕ್ಕೆ ಬೀಳ್ಕೊಡುಗೆ- ಭಾರವಾದ ಹೆಜ್ಜೆಗಳೊಡನೆ ಕಾಡಿನೆಡೆಗೆ ಪ್ರಯಾಣ ಹೊರಟ ಗಜಪಡೆ!….

ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ತಂಡಕ್ಕೆ ಬೀಳ್ಕೊಡುಗೆ- ಭಾರವಾದ ಹೆಜ್ಜೆಗಳೊಡನೆ ಕಾಡಿನೆಡೆಗೆ ಪ್ರಯಾಣ ಹೊರಟ ಗಜಪಡೆ!….

spot_img
- Advertisement -
- Advertisement -

ಮೈಸೂರು: ಇಲ್ಲಿನ ಅರಮನೆ ಆವರಣದಲ್ಲಿ ಈ ಬಾರಿಯ ದಸರಾ ಜಂಬೂ ಸವಾರಿಯನ್ನು ಯಶಸ್ವಿಯಾಗಿ ಪೂರೈಸಿದ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಗಜಪಡೆಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು .

ಹಲವು ದಿನಗಳಿಂದ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ದಸರಾ ಆನೆಗಳು ಕಾಡಿನತ್ತ ಪಯಣ ಬೆಳೆಸಿದ್ದು, ಅಂಬಾರಿ ಆನೆ ಅಭಿಮನ್ಯು ಮತ್ತಿಗೋಡು ಶಿಬಿರಕ್ಕೆ ತೆರಳಿದ್ದಾನೆ. ಕಾವೇರಿ, ವಿಕ್ರಮ, ಗೋಪಿ ಆನೆಗಳು ದುಬಾರೆ ಶಿಬಿರಕ್ಕೆ ಹಾಗೂ ವಿಜಯಾ ಆನೆಕಾಡು ಶಿಬಿರಕ್ಕೆ ಹೊರಟವು. ಈ ಬಾರಿ ಒಂದೇ ತಂಡದಲ್ಲಿ ಮೈಸೂರಿಗೆ ಆಗಮಿಸಿದ್ದ 5 ಆನೆಗಳನ್ನು ಪ್ರತ್ಯೇಕ 5 ಲಾರಿಯಲ್ಲಿ ರವಾನಿಸಲಾಯಿತು.

- Advertisement -
spot_img

Latest News

error: Content is protected !!