- Advertisement -
- Advertisement -
ಉಡುಪಿ: ವೇತನ ನೀಡದ ಹಿನ್ನೆಲೆಯಲ್ಲಿ ಬಿ.ಆರ್. ಶೆಟ್ಟಿ ಹೆರಿಗೆ ಆಸ್ಪತ್ರೆಯಲ್ಲಿ ನೌಕರರು ಧರಣಿ ನಡೆಸಿದ್ದಾರೆ. ಸರಕಾರಿ ಸ್ವಾಮ್ಯದ ಖಾಸಗಿ ನಿರ್ವಹಣೆಯ ಹೆರಿಗೆ ಆಸ್ಪತ್ರೆಯಲ್ಲಿ ನೌಕರರ ಧರಣಿಗೆ ಉಡುಪಿ ಶಾಸಕ ರಘುಪತಿ ಭಟ್ ಸಾಥ್ ನೀಡಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಶಾಸಕರು ಗರಂ ಆಗಿದ್ದಾರೆ.

ಶಾಸಕ ರಘುಪತಿ ಭಟ್ ಸರಕಾರದಿಂದ 50 ಲಕ್ಷ ಅನುದಾನ ಮಂಜೂರು ಮಾಡಿಸಿದ್ದರೂ ಸರಕಾರದ ಅನುದಾನವನ್ನು ನೌಕರರಿಗೆ ಆಡಳಿತ ಮಂಡಳಿ ನೀಡದ ಆರೋಪ ಎದುರಾಗಿದೆ.
ಹೀಗಾಗಿ ನೌಕರರ ಜೊತೆ ಧರಣಿ ಕುಳಿತ ಶಾಸಕ ರಘುಪತಿ ಭಟ್ ಅವರಿಗೆ ಜಿಲ್ಲಾ ಸರ್ಜನ್, ಡಿಎಚ್ ಒ ಕೂಡಾ ಶಾಸಕರಿಗೆ ಸಾಥ್ ನೀಡಿದ್ದಾರೆ. ಆದರೂ ಕೂಡಾ ಆಸ್ಪತ್ರೆ ಆಡಳಿತ ಮಂಡಳಿ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಅರೋಪ ಕೇಳಿ ಬಂದಿದೆ.
- Advertisement -