- Advertisement -
- Advertisement -
ಬೆಳ್ತಂಗಡಿ: ಕಾಡಾನೆ ದಾಳಿಗೆ ತೆಂಗಿನ ಸಸಿ, ಗೇರು, ಬಾಳೆಗಿಡಗಳು, ಧ್ವಂಸವಾಗಿರುವ ಘಟನೆ ಬೆಳ್ತಂಗಡಿಯ ನಿಡ್ಲೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಪಾರ್ಪಿಕಲ್ಲು ಜಯರಾಂ ಪಾಳಂದ್ಯೆ ಅವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳಿಂದ ತೋಟಕ್ಕೆ ಭಾರೀ ಹಾನಿಯಾಗಿದೆ.
ಆನೆಗಳು ಬಂದಿರೋದು ಹೆಜ್ಜೆ ಗುರುತಿನಿಂದ ತಿಳಿದುಬಂದಿದೆ. ಹದಿನೈದು ದಿನಗಳ ಹಿಂದೆಯೂ ಆನೆ ದಾಳಿ ಮಾಡಿದ್ದು ಸ್ಥಳೀಯರನ್ನು ಕಂಗಾಲಾಗುವಂತೆ ಮಾಡಿವೆ.
- Advertisement -