- Advertisement -
- Advertisement -
ಚಾರ್ಮಾಡಿ: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಕೊಂಡಿಯಾಗಿರುವ ಚಾರ್ಮಾಡಿ ಘಾಟ್ ನ ರಸ್ತೆ ಯಲ್ಲಿ ಇಂದು ಸಂಜೆ ಭಾರಿ ಗಾತ್ರದ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ.
ಕಾಡಾನೆ ಚಾರ್ಮಾಡಿಯ 7,8ನೇ ತಿರುವಿನ ಮಧ್ಯೆ ಇರುವ ಕಿರು ಜಲಪಾತದಲ್ಲಿ ಯಾವುದೇ ಅಂಜಿಕೆ ಇಲ್ಲದೆ ನೀರಿನಲ್ಲಿ ಆಟವಾಡುವುದನ್ನು ತರಕಾರಿ ಲಾರಿಯ ಚಾಲಕರು ವಿಡಿಯೋ ಮಾಡಿದ್ದಾರೆ.
ಲಾರಿ ಚಾಲಕರು ಆನೆಯ ಕುರಿತು ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್.ಪಿ.ಜಿ ಯವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಸಂದೇಶ್ ಮತ್ತು ಅವರ ತಂಡ, ಆನೆ ರಸ್ತೆ ಬಿಟ್ಟು ಕಾಡಿಗೆ ತೆರಳುವವರೆಗೂ ಸ್ಥಳದಲ್ಲೇ ಇದ್ದು, ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಂಡರು.
ಲಾಕ್ ಡೌನ್ ಹಿನ್ನಲೆಯಲ್ಲಿ ಈ ರಸ್ತೆಯಲ್ಲಿ ಅಷ್ಟೊಂದು ವಾಹನಗಳು ಓಡಾಟ ಕಮ್ಮಿ ಇದ್ದು, ಹಾಗಾಗಿ ಆನೆಗಳ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ. ಕೆಲ ದಿನಗಳ ಹಿಂದೆ ಕೂಡ ರಾತ್ರಿ ವೇಳೆ ಆನೆಯೊಂದು ಚಾರ್ಮಾಡಿ ರಸ್ತೆಯಲ್ಲಿ ಕಾಣಿಸಿಕೊಂಡಿತ್ತು.
- Advertisement -