- Advertisement -
- Advertisement -
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಂದಿನ ಒಂದು ವರ್ಷದ ಅವಧಿಗೆ ಶುದ್ದ ಜೇನುತುಪ್ಪ ಸರಬರಾಜು ಮಾಡಲು ಇ-ಟೆಂಡರ್ ಆಹ್ವಾನಿಸಲಾಗಿದೆ.
ಇ-ಟೆಂಡರ್ ಪದ್ದತಿಯ ಮೂಲಕ ಟೆಂಡರುಗಳನ್ನು https://kppp.karnataka.gov.in ವೆಬ್ ಸೈಟ್ ನಲ್ಲಿ ಆಹ್ವಾನಿಸಲಾಗಿದ್ದು, ಹಿಂದೂಯೇತರರು ಟೆಂಡರ್ ನಲ್ಲಿ ಭಾಗವಹಿಸಲು ಅವಕಾಶವಿಲ್ಲ.
ಟೆಂಡರ್ ಸಲ್ಲಿಸಲು ಅಕ್ಟೋಬರ್ 10 ಸಂಜೆ 4 ಗಂಟೆಯವರೆಗೆ ಅವಕಾಶವಿದ್ದು, ಅಕ್ಟೋಬರ್ 21 ರಂದು ಬೆಳಗ್ಗೆ 11 ಗಂಟೆಗೆ ಟೆಂಡರ್ ತೆರೆಯಲಾಗುತ್ತದೆ.
ಟೆಂಡರ್ ದಾರರು ಒಂದು ಲಕ್ಷ ರೂಪಾಯಿ ಇ.ಎಂ.ಡಿ. ಮೊತ್ತವನ್ನು ಇ-ಪೇಮೆಂಟ್ ಮೂಲಕ ಇ-ಪ್ರೊಕ್ಯೂರ್ ಮೆಂಟ್ ಮುಖಾಂತರ ಸಲ್ಲಿಸಬೇಕಾಗಿದ್ದು, ಇ.ಎಂ.ಡಿ. ಯೊಂದಿಗೆ ಸಲ್ಲಿಸದಿರುವ ಟೆಂಡರ್ ಅನ್ನು ಪರಿಗಣಿಸುವುದಿಲ್ಲ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.
- Advertisement -