Friday, June 27, 2025
HomeUncategorizedಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜೇನುತುಪ್ಪ ಸರಬರಾಜಿಗೆ ಇ-ಟೆಂಡರ್ ಆಹ್ವಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜೇನುತುಪ್ಪ ಸರಬರಾಜಿಗೆ ಇ-ಟೆಂಡರ್ ಆಹ್ವಾನ

spot_img
- Advertisement -
- Advertisement -

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಂದಿನ ಒಂದು ವರ್ಷದ ಅವಧಿಗೆ ಶುದ್ದ ಜೇನುತುಪ್ಪ ಸರಬರಾಜು ಮಾಡಲು ಇ-ಟೆಂಡರ್ ಆಹ್ವಾನಿಸಲಾಗಿದೆ.

ಇ-ಟೆಂಡರ್ ಪದ್ದತಿಯ ಮೂಲಕ ಟೆಂಡರುಗಳನ್ನು https://kppp.karnataka.gov.in ವೆಬ್ ಸೈಟ್ ನಲ್ಲಿ ಆಹ್ವಾನಿಸಲಾಗಿದ್ದು, ಹಿಂದೂಯೇತರರು ಟೆಂಡರ್ ನಲ್ಲಿ ಭಾಗವಹಿಸಲು ಅವಕಾಶವಿಲ್ಲ.

ಟೆಂಡರ್ ಸಲ್ಲಿಸಲು ಅಕ್ಟೋಬರ್ 10 ಸಂಜೆ 4 ಗಂಟೆಯವರೆಗೆ ಅವಕಾಶವಿದ್ದು, ಅಕ್ಟೋಬರ್ 21 ರಂದು ಬೆಳಗ್ಗೆ 11 ಗಂಟೆಗೆ ಟೆಂಡರ್ ತೆರೆಯಲಾಗುತ್ತದೆ.

ಟೆಂಡರ್ ದಾರರು ಒಂದು ಲಕ್ಷ ರೂಪಾಯಿ ಇ.ಎಂ.ಡಿ. ಮೊತ್ತವನ್ನು ಇ-ಪೇಮೆಂಟ್ ಮೂಲಕ ಇ-ಪ್ರೊಕ್ಯೂರ್ ಮೆಂಟ್ ಮುಖಾಂತರ ಸಲ್ಲಿಸಬೇಕಾಗಿದ್ದು, ಇ.ಎಂ.ಡಿ. ಯೊಂದಿಗೆ ಸಲ್ಲಿಸದಿರುವ ಟೆಂಡರ್ ಅನ್ನು ಪರಿಗಣಿಸುವುದಿಲ್ಲ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!