Tuesday, July 1, 2025
Homeಕರಾವಳಿಸುಳ್ಯದಲ್ಲಿ ಅವಿನಾಶ್ ಮೋಟಾರ್ಸ್ ಸಂಸ್ಥಾಪಕ ದಿ. ನಾರಾಯಣ ರೈ ಸಾಕ್ಷ್ಯಚಿತ್ರ ಬಿಡುಗಡೆ

ಸುಳ್ಯದಲ್ಲಿ ಅವಿನಾಶ್ ಮೋಟಾರ್ಸ್ ಸಂಸ್ಥಾಪಕ ದಿ. ನಾರಾಯಣ ರೈ ಸಾಕ್ಷ್ಯಚಿತ್ರ ಬಿಡುಗಡೆ

spot_img
- Advertisement -
- Advertisement -

ಸುಳ್ಯ: ಸುಳ್ಯದ ಅವಿನಾಶ್ ಮೋಟಾರ್ಸ್ ಸಂಸ್ಥೆಯ ಸಂಸ್ಥಾಪಕರಾಗಿದ್ದ ದಿ. ನಾರಾಯಣ ರೈ ಅವರ ಬದುಕು ಮತ್ತು ಸಾಧನೆ ಕುರಿತ ಸಾಕ್ಷ್ಯಚಿತ್ರ ಇಂದು ಬಿಡುಗಡೆಯಾಗಿದೆ. ಸುಳ್ಯದಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಎಸ್. ಅಂಗಾರ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿದರು.

ಸಮಾರಂಭದಲ್ಲಿ ಪದ್ಮಶ್ರೀ ಗಿರೀಶ್ ಭಾರದ್ವಾಜ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಹರೀಶ್ ಕಂಜಿಪಿಲಿ, ದುರ್ಗಾಕುಮಾರ್ ನಾಯರ್ ಕೆರೆ ಮತ್ತು ಇತರರು ಪಾಲ್ಗೊಂಡಿದ್ದರು.

ದಿ. ನಾರಾಯಣ ರೈ ಸಂಸ್ಮರಣಾ ಸಮಿತಿ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು. ಸುಳ್ಯ ತಾಲೂಕಿನ ಗ್ರಾಮೀಣ ಸಂಪರ್ಕ ಕ್ರಾಂತಿಯ ಹರಿಕಾರ ಎಂದೇ ಖ್ಯಾತಿ ಪಡೆದಿದ್ದ ನಾರಾಯಣ ರೈ ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದರು.

- Advertisement -
spot_img

Latest News

error: Content is protected !!