- Advertisement -
- Advertisement -
ಕುಂದಾಪುರ ಮನೆಯ ಕಾಪಾಟಿನಲ್ಲಿಟ್ಟಿದ್ದ 2 ಲಕ್ಷ ರೂ. ಮೌಲ್ಯದ 50 ಗ್ರಾಂ ತೂಕದ ಚಿನ್ನದ ಸರ ಕಳವಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಯುಗಾದಿ ಹಬ್ಬಕ್ಕಾಗಿ ಪ್ರದೀಪ್ ಶೆಟ್ಟಿ ಎಂಬವರ ಪತ್ನಿ ಚಿನ್ನದ ಸರ ಹಾಕಿಕೊಳ್ಳಲು ಕಪಾಟಿನ ಲಾಕರ್ ಬೀಗ ತೆಗೆದಿದ್ದಾರೆ. ಈ ವೇಳೆ ಚಿನ್ನದ ಸರ ಕಳವಾಗಿರೋದು ಗೊತ್ತಾಗಿದೆ.
ಇವರ ದೂರದ ಸಂಬಂಧಿ ರಾಘವೇಂದ್ರ ಎಂಬಾತ ಆಗಾಗ ಮನೆಗೆ ಬರುತ್ತಿದ್ದು, ಈ ಚಿನ್ನದ ಸರವನ್ನು ಆತನೇ ಕಳವು ಮಾಡಿರುವ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -