Sunday, June 29, 2025
Homeಕರಾವಳಿಮಂಗಳೂರಿನಲ್ಲಿ ಸಚಿವ ಸುನೀಲ್ ಕುಮಾರ್ ಮತ್ತು ಶಾಸಕ ವೇದವ್ಯಾಸ ಕಾಮತ್ ಸಿಟಿ ರೌಂಡ್ಸ್

ಮಂಗಳೂರಿನಲ್ಲಿ ಸಚಿವ ಸುನೀಲ್ ಕುಮಾರ್ ಮತ್ತು ಶಾಸಕ ವೇದವ್ಯಾಸ ಕಾಮತ್ ಸಿಟಿ ರೌಂಡ್ಸ್

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಮತ್ತು ಮಂಗಳೂರು ದಕ್ಷಿಣ ಶಾಸಕ‌ ವೇದವ್ಯಾಸ ಕಾಮತ್ ಇಂದು ಬೆಳಗ್ಗೆ ಮಂಗಳೂರು ಸಿಟಿ ರೌಂಡ್ಸ್ ನಡೆಸಿದ್ದಾರೆ.

ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ನಡೆಸುವ ಹಿನ್ನೆಲೆಯಲ್ಲಿ ಸಚಿವರು ಮತ್ತು‌ ಶಾಸಕರ ಸಿಟಿ ರೌಂಡ್ಸ್ ನಡೆದಿದೆ. ಉರ್ವ ಮಾರ್ಕೆಟ್, ಇಂಡೋರ್ ಸ್ಟೇಡಿಯಂ, ಮಂಗಳಾ ಸ್ಟೇಡಿಯಂ, ಕ್ಲಾಕ್ ಟವರ್ ಪೆಡೆಸ್ಟ್ರಿಯನ್ ಪ್ಲಾಜಾ, ಸ್ಟೇಟ್ ಬ್ಯಾಕ್ ಬಳಿಯ ಸರ್ವೀಸ್ ಬಸ್ ನಿಲ್ದಾಣ, ಎಮ್ಮೆಕೆರೆಯ ಈಜುಕೊಳ, ಮಂಗಳಾದೇವಿ ದೇವಸ್ಥಾನ ರಸ್ತೆ, ನಂದಿಗುಡ್ಡ ಓವರ್ ಹೆಡ್ ಟ್ಯಾಂಕ್, ಕಂಕನಾಡಿ ಮಾರ್ಕೆಟ್, ಕದ್ರಿ ಮಾರ್ಕೆಟ್ ಮತ್ತು ಕದ್ರಿ ಪಾರ್ಕ್ ರೋಡ್ ನಲ್ಲಿ ಕಾಮಗಾರಿ ಪರಿಶೀಲನೆ ನಡೆದಿದೆ.

ಸಿಟಿ ರೌಂಡ್ಸ್ ವೇಳೆ ಸಚಿವ ಸುನೀಲ್ ಕುಮಾರ್ ಮತ್ತು ಶಾಸಕ ವೇದವ್ಯಾಸ ಕಾಮತ್ ಅಂಗಡಿಯಲ್ಲಿ ಚಹಾ ಸೇವಿಸಿದರು. ಇದರ ಜೊತೆಗೆ ಸಚಿವ ಸುನೀಲ್ ಕುಮಾರ್ ಜಿಮ್ ನಲ್ಲಿ ಕಸರತ್ತು‌ ಕೂಡಾ ನಡೆಸಿದರು.

- Advertisement -
spot_img

Latest News

error: Content is protected !!