Sunday, May 19, 2024
Homeಕರಾವಳಿಬೆಳ್ತಂಗಡಿಯಲ್ಲಿ ರೆಡ್‌ಕ್ರಾಸ್ ವತಿಯಿಂದ ಉಚಿತ ಮಜ್ಜಿಗೆ ವಿತರಣೆ

ಬೆಳ್ತಂಗಡಿಯಲ್ಲಿ ರೆಡ್‌ಕ್ರಾಸ್ ವತಿಯಿಂದ ಉಚಿತ ಮಜ್ಜಿಗೆ ವಿತರಣೆ

spot_img
- Advertisement -
- Advertisement -

ಬೆಳ್ತಂಗಡಿ: ಸುಡುವ ಬಿಸಿಲಿಗೆ, ಬಾಯಾರಿದ ಸಾರ್ವಜನಿಕರಿಗೆ ತಂಪಾದ ಮಜ್ಜಿಗೆ ನೀಡಲು ರೆಡ್‌ಕ್ರಾಸ್ ಬೆಳ್ತಂಗಡಿ ಸಜ್ಜಾಗಿದ್ದು, ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಮಜ್ಜಿಗೆ ನೀಡಲಾಗುತ್ತಿದೆ.

ನೆತ್ತಿಮೇಲೆ ಉರಿಯೋ ಸೂರ್ಯ, ಪಾದಗಳನ್ನು ಸುಡುವ ಭೂಮಿ, ಸುತ್ತಲೂ ಬಿಸಿಗಾಳಿ, ಬಾಯಾರಿಕೆ ತಣಿಸಲು ತಂಪುಪಾನಿಯಗಳು ಬೇಕೇ-ಬೇಕು. ಜನರ ಬಾಯಾರಿಕೆ ತಣಿಸಲೆಂದೇ  ರೆಡ್‌ಕ್ರಾಸ್ ವತಿಯಿಂದ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಮಾಡಲಾಗುತಿದ್ದು, ರೆಡ್ ಕ್ರಾಸ್ ಸಂಸ್ಥೆಯ ಈ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಅಧ್ಯಕ್ಷ ಹರಿಪ್ರಸಾದ್, ಕಾರ್ಯದರ್ಶಿ ಯಶವಂತ ಪಟವರ್ಧನ್, ಸದಸ್ಯರಾದ ಶ್ರೀಮತಿ ಸುಕನ್ಯಾ, ಪರಿಮಳಾ, ಸುಜಿತ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!