Sunday, May 26, 2024
Homeತಾಜಾ ಸುದ್ದಿಸುರತ್ಕಲ್:‌ ವಿದ್ಯಾರ್ಥಿಗಳ ಕೈಯಿಂದ ರಾಖಿ ಬಿಚ್ಚಿಸಿದ ಪ್ರಕರಣ: ಶಿಕ್ಷಕಿ ಕ್ಷಮೆ ಕೇಳುವುದರ ಮೂಲಕ ವಿವಾದ ಇತ್ಯರ್ಥ

ಸುರತ್ಕಲ್:‌ ವಿದ್ಯಾರ್ಥಿಗಳ ಕೈಯಿಂದ ರಾಖಿ ಬಿಚ್ಚಿಸಿದ ಪ್ರಕರಣ: ಶಿಕ್ಷಕಿ ಕ್ಷಮೆ ಕೇಳುವುದರ ಮೂಲಕ ವಿವಾದ ಇತ್ಯರ್ಥ

spot_img
- Advertisement -
- Advertisement -

ಸುರತ್ಕಲ್:‌ ಇಲ್ಲಿನ ಕಾಟಿಪಳ್ಳದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳು ರಕ್ಷಾ ಬಂಧನದ ಪ್ರಯುಕ್ತ ಕೈಗೆ ಕಟ್ಟಿದ್ದ ರಾಖಿಯನ್ನು ಶಿಕ್ಷಕಿ ಕಸದ ಬುಟ್ಟಿಗೆ ಎಸೆದ ಪ್ರಕರಣ ಸುಖಾಂತ್ಯ ಕಂಡಿದೆ.

ವಿದ್ಯಾರ್ಥಿಗಳ ಪೋಷಕರು, ಹಿಂದೂ ಸಂಘಟನೆಗಳ ಪ್ರಮುಖರು ಶಾಲೆಗೆ ಆಗಮಿಸಿ ಶಿಕ್ಷಕರು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ರು. ಕೊನೆಗೆ ಸುರತ್ಕಲ್‌ ಪೊಲೀಸ್‌ ಠಾಣೆಯ ಅಧಿಕಾರಿ ಚಂದ್ರಪ್ಪ ಹಾಗೂ ಎಸ್‌ಐ ಪುನೀತ್‌ ಸಮ್ಮುಖದಲ್ಲಿ ಶಾಲೆಯ ಸಂಚಾಲಕ ಸಂತೋಷ್‌ ಲೋಬೋ ಕ್ಷಮೆಯಾಚಿಸಿದ್ದಾರೆ. ಹಾಗೇ ಮಕ್ಕಳ ಕೈಯಲ್ಲಿದ್ದ ರಾಕಿ ಎಸೆದ ಶಿಕ್ಷಕಿ ಕೂಡಾ ಕ್ಷಮೆ ಯಾಚಿಸಿದ್ದಾರೆ.

- Advertisement -
spot_img

Latest News

error: Content is protected !!