ಮಂಗಳೂರು: ಮಹತ್ವಾಕಾಂಕ್ಷೆಯ ಸಾಗರಮಾಲಾ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಭರವಸೆ ನೀಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಒಟ್ಟಾರೆ ಅಭಿವೃದ್ಧಿ ಸಾಧಿಸಲು ಬಂದರುಗಳು, ಜಲಸಾರಿಗೆ, ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಸಹಾಯ ಮಾಡುವುದು ಯೋಜನೆಯಾಗಿದೆ ಎಂದು ಅವರು ಹೇಳಿದರು.
‘ಸಚಿವರು ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ ಅವಧಿಯಲ್ಲಿ ಜಿಲ್ಲೆಯ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡುವ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದೆವು.ಸಾಗರಮಾಲಾ ಯೋಜನೆಯಡಿ ರೂಪಿಸಿರುವ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,’’ ಎಂದು ವಿವರಿಸಿದರು.
350 ಕೋಟಿ ವೆಚ್ಚದಲ್ಲಿ ಲಕ್ಷದ್ವೀಪಕ್ಕೆ ಮೀಸಲಾದ ವಿಶೇಷ ಜೆಟ್ಟಿ ಕಾರ್ಗೋ ಮತ್ತು ಕ್ರೂಸ್ ಟರ್ಮಿನಲ್ ಸ್ಥಾಪನೆ, 98 ಕೋಟಿ ಮೌಲ್ಯದ ಹಳೆಯ ಬಂದರು ಸಂಪರ್ಕ ರಸ್ತೆ, 30.5 ಕೋಟಿ ವೆಚ್ಚದಲ್ಲಿ ಗುರ್ಪುರ ನದಿಯಲ್ಲಿ ದ್ವೀಪಗಳ ಅಭಿವೃದ್ಧಿ, ವಿವಿಧೋದ್ದೇಶ ಬಂದರು, ಬೀಚ್ ನಿರ್ಮಾಣ ಮುಂತಾದ ಬೇಡಿಕೆಗಳು. ಬೆಂಗ್ರೆಯಲ್ಲಿ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲಸೌಕರ್ಯ, 10.68 ಕೋಟಿ ವೆಚ್ಚದಲ್ಲಿ ತೇಲುವ ಜೆಟ್ಟಿ, ನೇತ್ರಾವತಿ ಮತ್ತು ಗಿರ್ಪುರ ನದಿಗಳಲ್ಲಿ ಜಲಮಾರ್ಗ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಮುಂದೆ ಇರಿಸಲಾಗಿದೆ ಎಂದು ನಳಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.