- Advertisement -
- Advertisement -
ಕಲ್ಯಾಣ ಕರ್ನಾಟಕ ಸಾರಿಗೆಯ ಸಂಡೂರು ಘಟಕದಲ್ಲಿ ಸಂಚರಿಸುವ ಬಸ್ನಲ್ಲಿ ವಿತರಿಸುವ ಟಿಕೆಟ್ಗಳ ಮೇಲೆ ಪದ್ಮಶ್ರೀ ಪುರಸ್ಕೃತ ಜಯನಗರ ಜಿಲ್ಲೆಯ ತೃತೀಯ ಲಿಂಗಿ ಮಾತ ಮಂಜಮ್ಮ ಜೋಗತಿರವರಿಗೆ ಸಾರಿಗೆ ಇಲಾಖೆಯಿಂದ ಎಂದು ಅಪೂರ್ಣ ಸಾಲುಗಳನ್ನು ಮುದ್ರಿಸಿ ಪ್ರಯಾಣಿಕರಿಗೆ ನೀಡುತ್ತಿದ್ದಾರೆ. ಇದಕ್ಕೆ ಅನೇಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಅವರಿಗೆ ಗೌರವ ಸಲ್ಲಿಸಲು ಹೋಗಿ ಸಾರಿಗೆ ಇಲಾಖೆ ಯಡವಟ್ಟು ಮಾಡಿಕೊಂಡಿದೆ.
ಪದ್ಮಶ್ರೀ ಪ್ರಶಸ್ತಿ ಪಡೆದವರ ಬಗ್ಗೆ ಈ ರೀತಿ ಅಪೂರ್ಣವಾದ ವಿವರ ಪ್ರಕಟಿಸಿ ಅವರಿಗೆ ಅಗೌರವ ಸೂಚಿಸುತ್ತಿರುವುದು ಸರಿಯಲ್ಲ ಎಂದು ಪ್ರಯಾಣಿಕ ರಮೇಶ ವಿರೋದ ವ್ಯಕ್ತ ಪಡಿಸಿದ್ದಾರೆ.
- Advertisement -