- Advertisement -
- Advertisement -
ಬೈಂದೂರು: ಕಿರಿಮಂಜೇಶ್ವರದ ಆಕಳಬೈಲು ಎಂಬಲ್ಲಿ ಸಮುದ್ರ ದಡದ ಬಳಿ ಈಜಾಡುತ್ತಿರುವಾಗ ಯುವಕನೂರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಹುಬ್ಬಳ್ಳಿಯ ಸಂತೋಷನಗರದ ನಿವಾಸಿ ವೆಂಕಟೇಶ್ ( 28 ) ಮೃತಪಟ್ಟವರು . ಬೈಂದೂರಿನ ಕಿರಿಮಂಜೇಶ್ವರದ ಆಕಳಬೈಲುವಿನ ನರಸಿಂಹ ಪೂಜಾರಿ ಅವರ ಮನೆಗೆ ಬಂದಿದ್ದ ವೆಂಕಟೇಶ್ ಅವರು ಇಂದು ನರಸಿಂಹ ಪೂಜಾರಿ ಅವರ ಮಕ್ಕಳೊಂದಿಗೆ ಆಕಳಬೈಲುವಿನ ಮನೆಯ ಬಳಿಯ ಸಮುದ್ರದಕ್ಕೆ ಈಜಾಡಲು ಹೋಗಿದ್ದರು .
ಸಮುದ್ರದ ಅಲೆಗೆ ಆಯತಪ್ಪಿ ನೀರಿನಲ್ಲಿ ಮುಳುಗಿದ್ದರು . ತಕ್ಷಣ ಅವರನ್ನು ನೀರಿನಿಂದ ಮೇಲೆತ್ತಿ ಚಿಕಿತ್ಸೆಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು , ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -