Sunday, June 29, 2025
Homeತಾಜಾ ಸುದ್ದಿಬೆಳ್ತಂಗಡಿ: ನಾಪತ್ತೆಯಾದ ವ್ಯಕ್ತಿಯ ಮೃತ ದೇಹ ನದಿ ದಡದಲ್ಲಿ ಪತ್ತೆ...!

ಬೆಳ್ತಂಗಡಿ: ನಾಪತ್ತೆಯಾದ ವ್ಯಕ್ತಿಯ ಮೃತ ದೇಹ ನದಿ ದಡದಲ್ಲಿ ಪತ್ತೆ…!

spot_img
- Advertisement -
- Advertisement -

ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ 9 ದಿನದ ಬಳಿಕ ನದಿ ದಡದಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ನಡೆದಿದೆ.

ಅರಸಿನಮಕ್ಕಿ, ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾಗಿದ್ದ ಕುಂಟಾಲಪಲಿಕೆ ಅಣ್ಣುರವರ ಪುತ್ರ ಗಣೇಶ್ (24) ಮೃತ ವ್ಯಕ್ತಿ. ಗಣೇಶ್ ರವರು ಡಿ.14ರಂದು ನಾಪತ್ತೆಯಾಗಿದ್ದು, 9 ದಿನದ ಬಳಿಕ ನಿನ್ನೆ ಶವವಾಗಿ ಸಂಜೆ ಕಪಿಲ ನದಿ ದಡದಲ್ಲಿ ಪತ್ತೆಯಾಗಿದ್ದಾರೆ.

ತನ್ನ ತಂದೆಯೊಂದಿಗೆ ಕೆಲಸಕ್ಕೆ ಹೋಗುತ್ತಿದ್ದ ಗಣೇಶ್‌ರವರು ಡಿ 14 ರಂದು ಕೂಡಾ ಕಲಸಕ್ಕೆ ಹೋದವರು ರಾತ್ರಿ 9 :00 ಗಂಟೆಯ ಹೊತ್ತಿಗೆ ಅಂಗಡಿಗೆಂದು ಹೋದವರು ನಂತರ ನಾಪತ್ತೆಯಾಗಿದ್ದರು. ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರಲಿಲ್ಲ. ನಿನ್ನೆ ಸಂಜೆ ಕುಂಟಾಲಪಲಿಕೆ ಭಜನಾ ಮಂದಿರದ ಬಳಿಯ ಕಪಿಲಾ ನದಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಸ್ಟಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿನೀಡಿ ತನಿಖೆ ನಡೆಸುತ್ತಿದ್ದಾರೆ. ಇವರ ಸಾವಿನ ಬಗ್ಗೆ ಹಲವರಲ್ಲಿ ಶಂಕೆ ವ್ಯಕ್ತವಾಗಿದ್ದು ಪೋಲೀಸರ ತನಿಖೆಯ ಬಳಿಕವೇ ಸಾವಿನ ನಿಖರ ಕಾರಣ ಗೊತ್ತಾಗಲಿದೆ.

- Advertisement -
spot_img

Latest News

error: Content is protected !!