- Advertisement -
- Advertisement -
ಗಂಗೊಳ್ಳಿ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಯ ಅಬ್ಬರಕ್ಕೆ ಸಿಕ್ಕು ನಿನ್ನೆ ಸಮುದ್ರ ಪಾಲಾಗಿದ್ದ ಮೀನುಗಾರನ ಮೃತದೇಹ ಇಂದು ಗಂಗೊಳ್ಳಿ ಬ್ರೇಕ್ ವಾಟರ್ ಬಳಿಯ ಬೇಲಿಕೇರಿ ಬಂದರು ಸಮೀಪ ಪತ್ತೆಯಾಗಿದೆ.
ಗಂಗೊಳ್ಳಿಯ ಮಲ್ಯರಬೆಟ್ಟು ನಿವಾಸಿ ವೆಂಕಟೇಶ್ ಖಾರ್ವಿ (47) ಮೃತ ಮೀನುಗಾರ.
ಗಂಗೊಳ್ಳಿ ಆಪತ್ಪಾಂಧವ 24X7 ಆಂಬುಲೆನ್ಸ್ ಮೂಲಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಯಿತು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
- Advertisement -