Friday, May 10, 2024
Homeಕರಾವಳಿಪುತ್ತೂರು; ಗ್ರಾಮ ಪಂಚಾಯತ್ ನ ನೀರು ಸರಬರಾಜು ಟ್ಯಾಂಕಿನಲ್ಲಿ ವ್ಯಕ್ತಿಯ ಶವ ಪತ್ತೆ

ಪುತ್ತೂರು; ಗ್ರಾಮ ಪಂಚಾಯತ್ ನ ನೀರು ಸರಬರಾಜು ಟ್ಯಾಂಕಿನಲ್ಲಿ ವ್ಯಕ್ತಿಯ ಶವ ಪತ್ತೆ

spot_img
- Advertisement -
- Advertisement -

ಪುತ್ತೂರು; ಗ್ರಾಮ ಪಂಚಾಯತ್ ನ ನೀರು ಸರಬರಾಜು ಟ್ಯಾಂಕಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪುತ್ತೂರಿನ ಕಾವು ಎಂಬಲ್ಲಿ ನಡೆದಿದೆ.

ಮಾಡ್ನೂರು ಗ್ರಾಮದ ತೋಟದಮೂಲೆ ಎಂಬಲ್ಲಿರುವ ಗ್ರಾಮ ಪಂಚಾಯತ್‌ನ ನೀರು ಸರಬರಾಜಿನ ಸಿಮೆಂಟ್ ಟಾಂಕಿಯ ಒಳಗಡೆ ಶವ ಪತ್ತೆಯಾಗಿದೆ. ಪರಿಸರದಲ್ಲಿ ದುರ್ನಾತ ಬೀರುತ್ತಿದ್ದುದರಿಂದ ಸ್ಥಳೀಯರು ಸಂಶಯಗೊಂಡು ಟಾಂಕಿಯನ್ನು ನೋಡಿದಾಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವ ಗಂಡಸಿನ ಶವ ಪತ್ತೆಯಾಗಿದೆ.

ಟಾಂಕಿನ ಮೇಲಿನ ಭಾಗದಲ್ಲಿ ಕೇಸರಿ ಬಣ್ಣದ ಲುಂಗಿಯೊಂದು ಪತ್ತೆಯಾಗಿದೆ.ಟಾಂಕಿಯ ಒಳಗಡೆ ಸ್ವಚ್ಛ ಮಾಡಲೆಂದು ಇಳಿಯಲು ಉಪಯೋಗಿಸುತ್ತಿದ್ದ ಏಣಿ ನಾಪತ್ತೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!