- Advertisement -
- Advertisement -
ಮಲ್ಪೆ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಧಕ್ಕೆ ನೀರಿಗೆ ಬಿದ್ದು ಮೃತಪಟ್ಟ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ. ಛತ್ತಿಸ್ ಗಢ ಮೂಲದ ರಾಜ್ ಕುಮಾರ ಯಾದವ್ ( 34 ) ಮೃತಪಟ್ಟವರು.
ಮೀನುಗಾರಿಕೆಗಾಗಿ ಮಲ್ಪೆಗೆ ಬಂದಿದ್ದ ಇವರು , ಬೇರೆ ಬೇರೆ ಬೋಟ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ರಾಹುಕ್ ಪೈಂಕಾರ ಅವರು ಕೆಲಸ ಮಾಡುತ್ತಿದ್ದ ಬೋಟ್ ನ ಹತ್ತಿರ ಬಂದು ತನಗೆ ಕೆಲಸ ಇರುವುದಿಲ್ಲ ಎಂದು ತಿಳಿಸಿ ಮರಳಿದ್ದರು . ನಂತರ ರಾಜ್ ಕುಮಾರ ಯಾದವ್ ಮೃತ ದೇಹ ಕೊಡವೂರಿನ ಬಾಪುತೋಟ ಬಂದರಿನ ಟಿ- ಧಕ್ಕೆಯ ನೀರಿನಲ್ಲಿ ಪತ್ತೆಯಾಗಿದೆ .
ರಾಹುಕ್ ಪೈಂಕಾರ ಅವರ ದೂರಿನಂತೆ ರಾಜ್ ಕುಮಾರ ಯಾದವ್ ರವರು ಡಿ .12 ರಿಂದ ಡಿ . 27 ರ ನಡುವೆ ಬೋಟಿನಲ್ಲಿ ಮಲಗಿದ್ದವರು ಆಕಸ್ಮಿಕವಾಗಿ ಧಕ್ಕೆ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -