- Advertisement -
- Advertisement -
ಕಲಬುರ್ಗಿ : ಸೊಸೆಯೊಬ್ಬಳು ಅತ್ತೆ ಬೇಗ ಸಾಯಬೇಕು ಎಂದು 20 ರೂಪಾಯಿ ಚೀಟಿ ಮೇಲೆ ಬರೆದು ದೇವರಿಗೆ ಹಾಕಿದ ಘಟನೆ ಕಲ್ಬುರ್ಗಿ
ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದಲ್ಲಿದ ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ನಡೆದಿದೆ.
ಈ ದೇವಾಲಯಕ್ಕೆ ಹಲವೆಡೆಯಿಂದ ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ತೀರಿಸುವಂತೆ ಭಾಗ್ಯವಂತಿ ದೇವಿಯನ್ನು ಕೋರೋದು ವಾಡಿಕೆ. ಈ ದೇವಸ್ಥಾನಕ್ಕೆ ಬಂದ ಸೊಸೆಯೊಬ್ಬಳು 20 ರೂಪಾಯಿಯ ನೋಟಿನ ಮೇಲೆ ತಾಯಿ ನಮ್ಮ ಅತ್ತೆ ಬೇಗ ಸಾಯಲಿ ತಾಯಿ ಅಂತ ಹರಕೆ ಬರೆದು ಹಾಕಿರೋದು ದೇವಸ್ಥಾನದ ಹುಂಡಿಯನ್ನು ತೆರೆದು ಕಾಣಿಕೆ ಎಣಿಸುವಾಗ ಪತ್ತೆಯಾಗಿದೆ. ಸದ್ಯ ನೋಟಿನ ಪೋಟೋ ಎಲ್ಲೆಡೆ ವೈರಲ್ ಆಗಿದೆ.
- Advertisement -