Saturday, April 27, 2024
Homeಕರಾವಳಿಗ್ರಾಮೀಣ ಪ್ರತಿಭೆಗಳಿಂದ ಅದ್ಭುತವಾಗಿ ಮೂಡಿಬಂದ ಚಿತ್ರ ಮಗಳು! ಮುಗ್ಧ ಮಗಳ ಸುಂದರ ಕಥೆ, ಫೆಬ್ರವರಿ ಅಂತ್ಯಕ್ಕೆ...

ಗ್ರಾಮೀಣ ಪ್ರತಿಭೆಗಳಿಂದ ಅದ್ಭುತವಾಗಿ ಮೂಡಿಬಂದ ಚಿತ್ರ ಮಗಳು! ಮುಗ್ಧ ಮಗಳ ಸುಂದರ ಕಥೆ, ಫೆಬ್ರವರಿ ಅಂತ್ಯಕ್ಕೆ ರಾಜ್ಯಾದ್ಯಂತ ತೆರೆಗೆ

spot_img
- Advertisement -
- Advertisement -

ಮಗಳು, ಇದು ಗ್ರಾಮೀಣ ಪ್ರತಿಭೆಗಳಿಂದಲೇ ಮೂಡಿಬಂದ ಕನ್ನಡ ಚಲನಚಿತ್ರ. ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನೇ ಇಟ್ಟುಕೊಂಡು ಪೋಣಿಸಲಾದ ಮಗಳು ಎಂಬ ಕನ್ನಡ ಚಲನಚಿತ್ರಕ್ಕೆ ಚಿತ್ರಮಂಡಳಿಯಿಂದ ಅತ್ಯುತ್ತಮ ಚಲನಚಿತ್ರವೆಂದು ಯು ಸರ್ಟಿಫಿಕೆಟ್ ಲಭಿಸಿದೆ. ಜ. ೧೦ರಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿದ್ದಾರೆ. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆಯಾಗಲಿದ್ದು, ಫೆಬ್ರವರಿ ಅಂತ್ಯಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಳಿಗೆ ಮಗಳು ಬರಲಿದ್ದಾಳೆ.

ಗಾಡ್ ಗಿಫ್ಟ್ ಫ್ಯಾಮಿಲಿ ಫಿಲಂ ಬ್ಯಾನರ್‌ನಡಿ ನಿರ್ಮಾಣ ಆಗಿರುವ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ತೋಮಸ್ ಎಂ.ಎಂ. ಅವರು. ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿಯಾಗಿರುವ ತೋಮಸ್ ಎಂ.ಎಂ. ಆವರು ಮೂಲತಃ ಕೇರಳದ ಕಣ್ಣೂರಿನವರು. ಕಳೆದ ೧೫ ವರ್ಷಗಳಿಂದ ವೇಣೂರಿನಲ್ಲಿ ಕುಟುಂಬ ಸಮೇತರಾಗಿ ನೆಲೆಸಿದ್ದಾರೆ. ಚಿತ್ರಕಲಾ ಶಿಕ್ಷಕರಾಗಿ ಮಕ್ಕಳ ಭಾವನೆಗಳನ್ನು, ಪೋಷಕರ ಸಮಸ್ಯೆಗಳನ್ನು ಬಹಳಷ್ಟು ಹತ್ತಿರದಿಂದ ಅರ್ಥೈಸಿಕೊಂಡ ತೋಮಸ್ ಅವರು ಅವರಿಗೆ ಸಮಾಜಕ್ಕೆ ಒಂದು ಭಾಂದವ್ಯದ ಸಂದೇಶ ಸಾರಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಪೋಣಿಸಲಾದ ಚಿತ್ರವೇ ಮಗಳು. ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯ ಯುವ ಪ್ರತಿಭೆಗಳನ್ನೇ ಇಟ್ಟುಕೊಂಡು ನಿರ್ಮಿಸಲಾ ಚಿತ್ರ ಇದೀಗ ಎಲ್ಲರ ಗಮನ ಸೆಳೆದಿದೆ. ಫ್ಯಾಮಿಲಿ ಜತೆ ಒಟ್ಟಿಗೆ ಕೂತುಕೊಂಡು ನೋಡಬಹುದಾದ ಅದ್ಬುತ ಚಿತ್ರವೆನ್ನುತ್ತಾರೆ ನಿರ್ಮಾಪಕರು.

ಹಳ್ಳಿ ಕಲಾವಿದರು!

ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರಖ್ಯಾತ ತುಳುಚಲನಚಿತ್ರ ನಟ ನವೀನ್ ಡಿ. ಪಡೀಲ್ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪಕ್ಕಾ ಹಳ್ಳಿ ಕಲಾವಿದವರು ಎನ್ನುವುದೇ ವಿಶೇಷ. ಚಿತ್ರದ ರಾಮು ಪಾತ್ರದಲ್ಲಿ ನಿರ್ದೇಶಕ ತೋಮಸ್ ಎಂ.ಎಂ., ಮಗಳ ಪಾತ್ರದಲ್ಲಿ ಭಾರ್ಗವಿ ಆರ್. ಶೇಟ್, ತಾಯಿ ಪಾತ್ರದಲ್ಲಿ ಸವಿತಾ ಪ್ಲಾವ್ಯಾ ನಟಿಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಸ್, ಸುಂದರ ಹೆಗ್ಡೆ ಬಿ.ಇ., ಪಿ. ಧರಣೇಂದ್ರ ಕುಮಾರ್, ಶ್ರವಣ ಕುಮಾರಿ, ಅರ್ಪಿತಾ ಕೋಟ್ಯಾನ್, ಶ್ರೀಮಾ ಉಜಿರೆ, ಶರಣ್ ಶೆಟ್ಟಿ ವೇಣೂರು, ಆನಂದ ಗಾಂಧಿನಗರ, ಬಿಜಿಲ್ ಮ್ಯಾಥ್ಯೂ, ತನಿಷಾ ಕಾರ್ಕಳ ಮುಂತಾದವರು ನಟಿಸಿದ್ದಾರೆ.

ಚಿತ್ರದ ಸಹನಿರ್ಮಾಪಕರಾಗಿ ಬಿಜಿಲ್ ಮ್ಯಾಥ್ಯೂ, ಲತಾ ಮಂಗಳೂರು ಹಾಗೂ ಅರುಣ್ ಬೆಳ್ತಂಗಡಿ ಸಹಕರಿಸಿದ್ದರೆ ಸಹ ನಿರ್ದೇಶಕರಾಗಿ ಮಹಾಲಕ್ಷ್ಮೀ ಪೆರಾಡಿ ಮತ್ತು ಸಂದೇಶ ಬಡಕೋಡಿ ಕೆಲಸ ಮಾಡಿದ್ದಾರೆ. ಛಾಯಾಗ್ರಹಣ ಶಶಿಧರ ದೇವಾಡಿಗ ಉಡುಪಿ, ಸಂಗೀತಾ ಗುರುರಾಜ್ ಎಂ.ಬಿ., ನೃತ್ಯ ಸಂಯೋಜನೆ ಶ್ರವಣ ಕುಮಾರಿ ಮಾಡಿದ್ದರೆ ಸಂಕಲಕ ಹರೀಶ್ ಕೊಡ್ಪಾಡಿ ಮತ್ತು ಸುಶಾಂತ್ ಪೂಜಾರಿ ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಮನಸೆಳೆಯುವ ಮೂರು ಹಾಡುಗಳಿದ್ದು, ತೋಮಸ್ ಎಂ.ಎಂ. ಮತ್ತು ಸೀತಾ ಆರ್. ಶೇಟ್ ರಚಿಸಿದ್ದಾರೆ. ಸಂಗೀತಾ ಬಾಲಚಂದ್ರ ಮತ್ತು ಗುರುರಾಜ್ ಎಂ.ಬಿ. ಧ್ವನ್ವಿ ನೀಡಿದ್ದಾರೆ. ಪೋಸ್ಟಲ್ ಡಿಸೈನ್ ದಿನೇಶ್ ಗ್ಲೋಸಿಂಗ್ ಡಿಜಿಟಲ್ ಮೂಡಬಿದಿರೆ ನಿರ್ವಹಿಸಿದ್ದಾರೆ.

ಇವತ್ತಿನ ಕಾಲಘಟ್ಟದಲ್ಲಿ ಮದ್ಯಪಾನ ಜೀವನದ ಅಂಗವಾಗಿ ಬಿಟ್ಟಿದೆ. ಮದ್ಯಪಾನ ಎಂಬ ಒಂದು ಕೆಟ್ಟ ಚಟದಿಂದ ಒಂದು ಕುಟುಂಬ ಹೇಗೆ ಬೀದಿಗೆ ಬೀಳುತ್ತದೆ, ಓರ್ವ ಕುಡುಕತಂದೆಯ ಜೀವನವನ್ನು ಮಗಳು ಯಾವ ರೀತಿ ಪರಿವರ್ತಿಸುತ್ತಾಳೆ, ಕುಡುಕನ ಕತ್ತಲ ಜೀವನಕ್ಕೆ ಮಗಳು ಯಾವ ರೀತಿ ಬೆಳಕು ಆಗುತ್ತಾಳೆ ಅನ್ನುವುದೇ ಕಥೆಯ ಇಂಟ್ರೆಸ್ಟಿಂಗ್ ಸ್ಟೋರಿ.

- Advertisement -
spot_img

Latest News

error: Content is protected !!