ಕಡಬ : ಇಚ್ಚಂಪಾಡಿ ಗ್ರಾಮದ ಬಿಜೇರು ನಿವಾಸಿ ಹೆಸರಾಂತ ದೈವನರ್ತಕ ಹುಕ್ರಪ್ಪ ಪರವ (72) ರವರು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
16 ನೇ ವಯಸ್ಸಿನಲ್ಲಿಯೇ ದೈವನರ್ತನ ಸೇವೆ ಆರಂಭಿಸಿದ ಹುಕ್ರಪ್ಪ ಪರವರವರು ಮೂರು ವರ್ಷದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲಿಯೇ ಇದ್ದರು.
ಇಚ್ಚಂಪಾಡಿ ಬೂಡು ಉಳ್ಳಾಕ್ಲು ದೈವಸ್ಥಾನ, ಏಣೂರು ಕೋಟಿ ಚೆನ್ನಯ ಗರಡಿ, ಸುಳ್ಯಪದವು ಶ್ರೀ ಬ್ರಹ್ಮಬೈದರ್ಕಳ ಗರಡಿ , ಬಾಯಾರು, ಬಾಳೆಕಲ್ಲು , ಪಾಪೆಮಜಲು , ಕರ್ನಂಬಾಡಿ , ಪರ್ಪುಂಜ , ಶಿಶಿಲ , ಉಪ್ಪಾರಡ್ಕ , ಶಿಬಾಜೆ ಮೊಂಟೆತ್ತಡ್ಕ ಸೇರಿದಂತೆ ಕಾಸರಗೋಡು ಹಾಗೂ ದ.ಕ.ಜಿಲ್ಲೆಯ ಹಲವಾರು ದೈವಸ್ಥಾನಗಳಲ್ಲಿ ನರ್ತನ ಸೇವೆ ನೀಡುತ್ತಿದ್ದರು.
ಕೊಡಮಣಿತ್ತಾಯ , ಕೋಟಿ , ರುದ್ರಚಾಮುಂಡಿ , ಅಲ್ಲತ್ತಾಯ ಮತ್ತಿತರ ದೈವಗಳ ನರ್ತನ ಸೇವೆ ನೀಡುತ್ತಿದ್ದರ. ಇವರ ತಂದೆ ದಿ.ರಾಮ ಪರವರವರು ದೈವನರ್ತಕರಾಗಿದ್ದು ಅವರ ಬಳಿಕ ಹುಕ್ರಪ್ಪ ಪರವರವರು ನರ್ತನ ಸೇವೆ ಮುಂದುವರೆಸಿದರು. ಮೃತರು ಪತ್ನಿ ಕಮಲ, ಪುತ್ರರಾದ ಚೆನ್ನಪ್ಪ ಪರವ, ಡೀಕಯ್ಯ ಪರವರವರನ್ನು ಅಗಲಿದ್ದಾರೆ.