- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ವೇಣೂರು – ಮೂಡಬಿದಿರೆ ರಾಜ್ಯಹೆದ್ದಾರಿಯ ಕರಿಮಣೇಲು ಬಳಿಯ ಹಲವು ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯ ಅರಣ್ಯ ಇಲಾಖೆಯಿಂದ ನಡೆಯುತ್ತಿದೆ.
ಹೆದ್ದಾರಿ ಬದಿಯಲ್ಲಿ ಹಲವಾರು ಅಪಾಯಕಾರಿ ಮರಗಳಿರುವ ಬಗ್ಗೆ ಹಾಗೂ ಮರಗಳ ಹತ್ತಿರ ವಿದ್ಯುತ್ ತಂತಿಗಳು ಹಾದುಹೋಗಿದ್ದು, ಮಳೆಗಾಲದಲ್ಲಿ ಬಿದ್ದರೆ ಅಪಾಯ ತಂದೊಡ್ಡುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರು. ಇದೀಗ ಅರಣ್ಯ ಇಲಾಖೆಯವರು ಮರಗಳ ತೆರವು ಕಾರ್ಯ ಆರಂಭಿಸಿದ್ದಾರೆ.ಸ್ಥಳೀಯರ ಆತಂಕ ದೂರವಾಗಲಿದೆ.
- Advertisement -