- Advertisement -
- Advertisement -
ಮೂಡುಬಿದಿರೆ : ಶಿರ್ತಾಡಿ ಯುವಕ ಎರಡು ವಾರಗಳ ಹಿಂದೆ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ, ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ .
ಶಿರ್ತಾಡಿ ಕಜೆ ನಿವಾಸಿ ವಿಕೇಶ್ ( 22 ) ಮೃತಪಟ್ಟ ಯುವಕ . ಎರಡು ವಾರಗಳ ಹಿಂದೆ ಪಡುಕೊಣಾಜೆ ಬಳಿ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು .
ಆಟೋ ಚಾಲಕರಾಗಿದ್ದ ವಿಕೇಶ್ ಶಿರ್ತಾಡಿ, ವಾಲ್ಪಾಡಿ ತಂಡಗಳ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರರಾಗಿದ್ದರು.
- Advertisement -