- Advertisement -
- Advertisement -
ಮಂಗಳೂರು: ಸೇಂಟ್ ಜೆರೋಸಾ ಶಾಲೆಯಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಿದ ಆರೋಪದಡಿ ಶಾಲೆಯಿಂದ ಶಿಕ್ಷಕಿ ವಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಕಾನ್ಫರೆನ್ಸ್ ಆಫ್ ರಿಲೀಜಿಯಸ್ ಆಫ್ ಇಂಡಿಯಾ ಸಭೆ ನಡೆದಿದೆ.
ಮಂಗಳೂರಿನ ಅಲೋಶಿಯಸ್ ಹಾಲ್ ನಲ್ಲಿ ಸಿಆರ್ ಐ ನಿಂದ ಸಭೆ ನಡೆಸಲಾಗಿದ್ದು, ಸೇಂಟ್ ಜೆರೋಸಾ ಶಾಲೆಯ ಕಾನೂನು ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ.
ಅಲ್ಲದೇ ಪ್ರಕರಣದ ತನಿಖೆಗಾಗಿ ಮುಖ್ಯಮಂತ್ರಿಗೆ ದೂರು ನೀಡುವ ಬಗ್ಗೆ ಕೂಡಾ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ವಜಾಗೊಂಡ ಶಿಕ್ಷಕಿ ಸಿಸ್ಟರ್ ಪ್ರಭಾ ಜೊತೆ ನಿಲ್ಲುವುದಾಗಿ ಸಭೆಯಲ್ಲಿ ತೀರ್ಮಾನ ಮಾಡಿದ್ದು, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕಾರ್ಯವೈಖರಿಯನ್ನು ಸಿಆರ್ ಐ ಸಭೆ ಖಂಡಿಸಿದೆ.
- Advertisement -