Monday, May 20, 2024
Homeತಾಜಾ ಸುದ್ದಿದೇವಸ್ಥಾನದ ಬಸವನನ್ನು ಕದ್ದ ಗೋ ಕಳ್ಳರು; ತುಮಕೂರಿನಲ್ಲಿ ಬಸವನ ರಕ್ಷಣೆ

ದೇವಸ್ಥಾನದ ಬಸವನನ್ನು ಕದ್ದ ಗೋ ಕಳ್ಳರು; ತುಮಕೂರಿನಲ್ಲಿ ಬಸವನ ರಕ್ಷಣೆ

spot_img
- Advertisement -
- Advertisement -
ಬೀರೂರು: ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಬಸವಗಳೆಂದು ಹೆಸರುವಾಸಿಯಾಗಿದ್ದ, ದೇವಸ್ಥಾನಕ್ಕೆ ಸಂಬಂಧಿಸಿದ ಎರಡು ಬಸವಗಳನ್ನು ಗೋಕಳ್ಳರು ಕದ್ದೊಯ್ದಿದ್ದು ಈ ಪೈಕಿ ಒಂದು ಬಸವ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.

ಕಳೆದ ಹದಿಮೂರು ದಿನಗಳಿಂದ ಕಾಣೆಯಾಗಿದ್ದ ಎರಡು ಬಸವಗಳಲ್ಲಿ ದೊಡ್ಡ ಬಸವಣ್ಣನನ್ನು ತುಮಕೂರಿನ ಆರಕ್ಷಕರು ರಕ್ಷಣೆ ಮಾಡಿದ್ದಾರೆ. ತುಮಕೂರಿನ ಬೀಸನೆಲೆ ಅರಣ್ಯ ಪ್ರದೇಶದಲ್ಲಿ ಗೋವುಗಳನ್ನು ಹತ್ಯೆ ಮಾಡಲೆಂದು ಮೂವರು ಸಿದ್ಧತೆ ನಡೆಸುತ್ತಿರುವ ಕುರಿತು ಖಚಿತ ಮಾಹಿತಿಯನ್ನು ಹೊಂದಿದ ಪೊಲೀಸರು ತುರ್ತಾಗಿ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, 350 ಕೆ.ಜಿ ಗೋಮಾಂಸ, ಎರಡು ದ್ವಿಚಕ್ರ ವಾಹನ ಹಾಗೂ ಒಂದು ಟಾಟಾ ಏಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಧೆ ಮಾಡಲೆಂದು 13 ಕೋಣ, 14 ಹಸು ಸೇರಿ 27 ಜಾನುವಾರುಗಳ ಪೈಕಿ ಒಂದು ಬಸವ ಬೀರೂರಿನ ಬಸವನಂತೆ ಹೋಲಿಕೆ ಕಂಡಿದ್ದು ತುಮಕೂರು ಪೊಲೀಸರು ಬೀರೂರು ಠಾಣೆಯ ಪೊಲೀಸರ ಸಹಕಾರ ಪಡೆದು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಪ್ರಸ್ತುತ ಬಸವ ಸುರಕ್ಷಿತವಾಗಿದ್ದು, ಸಂಪೂರ್ಣ ನಿಯಮಾವಳಿಗಳನ್ನು ಪೂರೈಸಿದ ಬಳಿಕದಲ್ಲಿ ಬಸವಣ್ಣನನ್ನು ಮರಳಿ ದೇವಾಲಯಕ್ಕೆ ತರೆತರಬಹುದು ಎಂದರು. ಅಮೃತೂರು ಠಾಣೆಯ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿ
ಬಸವಣ್ಮನ ಪತ್ತೆಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!