- Advertisement -
- Advertisement -
ಚಿಕ್ಕಮಗಳೂರು : 45 ವರ್ಷಕ್ಕೆ ಮಗು ಹೆತ್ತು ಮಾರಾಟ ಮಾಡಿದ ಪಾಪಿ ದಂಪತಿ ಅಂದರ್ ಆಗಿದ್ದಾರೆ.ಎನ್.ಆರ್.ಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ಘಟನೆ ನಡೆದಿದೆ.
ರತ್ನ-ಸದಾನಂದ ಮಗು ಮಾರಿ ಪೊಲೀಸರಿಗೆ ಅತಿಥಿಯಾದ ದಂಪತಿ. ಮಗು ಮಾರಾಟಕ್ಕೆ ಸಹಕರಿಸಿದ ನಿವೃತ್ತ ನರ್ಸ್ ಕುಸುಮ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ನಿವೃತ್ತ ನರ್ಸ್ ಕುಸುಮ ಸಹೋದರ ಕಾರ್ಕಳದ ರಾಘವೇಂದ್ರ ಎಂಬುವರಿಗೆ 2 ದಿನದ ಮಗುವನ್ನ 1 ಲಕ್ಷಕ್ಕೆ ದಂಪತಿ ಹಾಗೂ ನರ್ಸ್ ಮಾರಾಟ ಮಾಡಿದ್ದರು. ಎನ್.ಆರ್. ಪುರ ಪೊಲೀಸರು ಮಗುವನ್ನು ರಕ್ಷಣೆ ಮಾಡಿ, ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಿದ್ದಾರೆ.
ರತ್ನ-ಸದಾನಂದ ದಂಪತಿಗೆ ಮೂವರು ಮಕ್ಕಳಿದ್ದು ಇಬ್ಬರನ್ನು ಮಾರಾಟ ಮಾಡಿರೋ ಶಂಕೆ ವ್ಯಕ್ತವಾಗಿದೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -