Friday, April 19, 2024
Homeಕರಾವಳಿನಿಟ್ಟೆ ಸಮೂಹ ಸಂಸ್ಥೆಯಿಂದ ಕೊರೋನಾ ಪರಿಹಾರ ನಿದಿಗೆ ರೂ. 1.25 ಕೋಟಿ ದೇಣಿಗೆ

ನಿಟ್ಟೆ ಸಮೂಹ ಸಂಸ್ಥೆಯಿಂದ ಕೊರೋನಾ ಪರಿಹಾರ ನಿದಿಗೆ ರೂ. 1.25 ಕೋಟಿ ದೇಣಿಗೆ

spot_img
- Advertisement -
- Advertisement -

ಮಂಗಳೂರು: ಡೆಡ್ಲಿ ವೈರಸ್‌ ಕೊರೊನಾ ಆರ್ಭಟ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಹರಿದುಬರುತ್ತಿದೆ. ಜನರ ಕಷ್ಟಕ್ಕೆ ಜನರೇ ದನಿಯಾಗುತ್ತಿರುವ ಈ ಸಂದರ್ಭದಲ್ಲಿ ನಿಟ್ಟೆ ಸಮೂಹ ಸಂಸ್ಥೆಗಳ ವತಿಯಿಂದ ಕೊರೋನಾ ವಿರುದ್ಧ ಹೋರಾಡಲು 1.25 ಕೋಟಿ ರೂ ಹಣವನ್ನು ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದೆ.
ದೇಣಿಗೆಯನ್ನು ಘೋಷಣೆ ಮಾಡಿರುವ ಸಮೂಹ ಸಂಸ್ಥೆಗಳ ಅಧ್ಯಕ್ಷ ಶ್ರೀ ಎನ್.ವಿನಯ್ ಹೆಗ್ಡೆ, 75 ಲಕ್ಷ ರೂ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಮತ್ತು 50 ಲಕ್ಷ ರೂ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಕೇರಳ ರಾಜ್ಯದಿಂದ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ತಲಪಾಡಿ ಮೂಲಕ ಮಂಗಳೂರಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಆದರೆ ಈ ರೋಗಿಗಳಿಗೆ ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ.

- Advertisement -
spot_img

Latest News

error: Content is protected !!