- Advertisement -
- Advertisement -
ತುಮಕೂರು: ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆಗೆ ಏರಲು ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಲೇ ಇದೆ. ಸಿಎಂ ರೇಸ್ ನಲ್ಲಿ ಸಾಕಷ್ಟು ಮಂದಿ ಇದ್ದು, ಈ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕೂಡಾ ಮಾತನಾಡಿದ್ದು, ತಮಗೂ ಸಿಎಂ ಆಗುವ ಆಸೆಯಿದೆ ಎಂದಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ 10 ಮಂದಿ ಸಿಎಂ ರೇಸ್ನಲ್ಲಿದ್ದು, ಅದ್ರಲ್ಲಿ ನಾನೂ ಕೂಡಾ ಒಬ್ಬ ಎಂದಿದ್ದಾರೆ. ಮುಖ್ಯಮಂತ್ರಿ ಆಗ್ಬೇಕು ಅನ್ನುವ ಕನಸು ಎಲ್ಲರಿಗೂ ಇದ್ದೇ ಇರುತ್ತೆ. ಅಧಿಕಾರಕ್ಕೆ ಬರ್ಬೇಕು ಅಂತ ಎಲ್ಲರಿಗೂ ಅನ್ಸುತ್ತೆ. ಹೀಗಾಗಿ ಸಿಎಂ ಕುರ್ಚಿಗೆ ತಾನು ಕೂಡ ಪ್ರಬಲ ಆಕಾಂಕ್ಷಿ ಎಂದಿದ್ದಾರೆ.
- Advertisement -