Monday, May 6, 2024
Homeಕರಾವಳಿಬೆಳ್ತಂಗಡಿ : ಗಂಗಾಧರ ಗೌಡರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಟ್ಟು: ಶಿಸ್ತು ಕ್ರಮ ಕೈಗೊಳ್ಳಲು 18...

ಬೆಳ್ತಂಗಡಿ : ಗಂಗಾಧರ ಗೌಡರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಟ್ಟು: ಶಿಸ್ತು ಕ್ರಮ ಕೈಗೊಳ್ಳಲು 18 ಪುಟಗಳ ಸಹಿಯೊಂದಿಗೆ ದಾಖಲೆ ಸಮೇತ ಡಿಕೆಶಿಗೆ ದೂರು

spot_img
- Advertisement -
- Advertisement -

ಬೆಳ್ತಂಗಡಿ : ಕರ್ನಾಟಕ ವಿಧಾನಸಭೆ ಚುನಾವಣೆ ಸಂಧರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಗಂಗಾಧರ ಗೌಡರವರು ಯಾವುದೇ ಪಕ್ಷದ ಹಾಗೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದ ಬಗ್ಗೆ ಸಿಟ್ಟುಗೊಂಡ ಬೆಳ್ತಂಗಡಿ ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗಂಗಾಧರ ಗೌಡರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ 18 ಪುಟಗಳ ಸಹಿ ಹಾಗೂ ಕೆಲ ದಾಖಲೆಗಳ ಜೊತೆ ದೂರು ಪತ್ರವನ್ನು ನೀಡಿದ್ದಾರೆ. ಈ ದೂರಿನ ಪ್ರತಿ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ exclusive ಅಗಿ ಲಭ್ಯವಾಗಿದೆ.

ದೂರಿನ ಸಾರಾಂಶ: ಕರ್ನಾಟಕ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಗಂಗಾಧರ ಗೌಡರವರು ಚುನಾವಣೆಗೆ ದಿನಾಂಕ ಘೋಷಣೆಯಾದ ದಿನದಿಂದ ಚುನಾವಣಾ ಫಲಿತಾಂಶ ದಿನಾಂಕದವರೆಗೆ ಪಕ್ಷದ ಪ್ರಮುಖ ಸ್ಥಾನದಲ್ಲಿ ಇದ್ದುಕೊಂಡು ಪಕ್ಷದ ಯಾವುದೇ ಸಭೆ ಸಮಾರಂಭದಲ್ಲಿ ಹಾಗೂ ಉಜಿರೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಭಾಗವಹಿಸಿದ ಪ್ರಚಾರ ಸಭೆಯಲ್ಲಿಯೂ ಭಾಗವಹಿಸಿರುವುದಿಲ್ಲ. ಮತ್ತು ತಮ್ಮ ಆಪ್ತರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಡಿ ಎಂದು ಹೇಳಿದ ಬಗ್ಗೆ ದಾಖಲೆಗಳನ್ನು ಈ ಪತ್ರದೊಂದಿಗೆ ಕಳುಹಿಸಲಾಗುತ್ತದೆ. ಶೀಘ್ರವಾಗಿ ಪಕ್ಷಕ್ಕೆ ದ್ರೋಹ ಮಾಡಿದ ವ್ಯಕ್ತಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿ ಎಂದು ದಿನಾಂಕ 05/06/2023 ರಂದು ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!