- Advertisement -
![]()
- Advertisement -
ಬೆಳ್ತಂಗಡಿ :ಬಳಂಜ ನಿವಾಸಿ ಜಯರಾಜ್ ಹೆಗಡೆ ಇವರು ನಡ ಗ್ರಾಮ ಪಂಚಾಯತಿಯಲ್ಲಿ ಉಗ್ರಾಣಿಯಾಗಿ ಕೆಲಸ ಮಾಡುತ್ತಿದ್ದು, ಜೂನ್ 08ರಂದು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಖಾಸಗಿ ಬಸ್ ಅಪಘಾತವಾಗಿ ಸಾವನ್ನಪ್ಪಿದ್ದರು. ಜಯರಾಜ್ ಹೆಗಡೆ ಅವರು ಎಸ್ ಬಿ ಐ ಲೈಫ್ ವಿಮಾ ಸಲಹೆಗಾರ ಮಂಜುನಾಥ್ ಗುಡಿಗಾರ್ ರವರಲ್ಲಿ ವಿಮೆ ಮಾಡಿಸಿದ್ದು, ಅವರ ಕುಟುಂಬಕ್ಕೆ ರೂ. 5 ಲಕ್ಷ ವಿಮಾ ಮೊತ್ತವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಬಿ ಐ ಲೈಫ್ ಬ್ರಾಂಚ್ ಮೆನೇಜರ್ ಸಿದ್ದಪ್ಪ ಸ್ವಾಮಿ, ಬಿಸಿನೆಸ್ ಮ್ಯಾನೇಜರ್ ಗಿಲ್ಬರ್ಟ್ ಪಿಂಟೋ ಮತ್ತು ವಿಮಾ ಸಲಹೆಗಾರ ಮಂಜುನಾಥ್ ಗುಡಿಗಾರ್ ಉಪಸ್ಥಿತರಿದ್ದರು.
- Advertisement -


