- Advertisement -
- Advertisement -
ಕಾಪು: ದೇಸಿ ನಾಯಿ ಮರಿಗೆ ವ್ಯಕ್ತಿಯೋರ್ವ ವಿಷ ಹಾಕಿ ಕೊಂದಿರುವ ಘಟನೆ ಕಾಪು ಪರಿಸರದಲ್ಲಿ ನಡೆದಿದ್ದು, ಈ ಕುರಿತಂತೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಪುವಿನ ಸಮಾಜ ಸೇವಕಿ ಬಿಂದು ಎಂಬವರು ಸಾಕುತ್ತಿದ್ದ ನಾಯಿಮರಿಗೆ ಕುಮಾರ ಎಂಬ ವ್ಯಕ್ತಿಯೋರ್ವ ವಿಷ ಹಾಕಿದ್ದಾನೆ ಎನ್ನಲಾಗಿದೆ. ಈ ನಾಯಿ ಮರಿ ಕಳೆದ ಆರು ತಿಂಗಳಿನಿಂದ ಗಡ್ಡೆ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಬಳಿಕ ಗುಣಮುಖಹೊಂದುತ್ತಿದ್ದ ಸಂದರ್ಭದಲ್ಲಿ ಫೆ.21 ರಂದು ರಾತ್ರಿ 11.00 ಗಂಟೆಯಿಂದ ಫೆ. 22ರ ಬೆಳಿಗ್ಗೆ 7 ಗಂಟೆಯ ನಡುವೆ ಕುಮಾರ್ ಎಂಬವರು ಮನೆಯ ಅಂಗಳದಲ್ಲಿ ನಾಯಿ ಮರಿಗೆ ವಿಷ ಪದಾರ್ಥ ಹಾಕಿ ಕೊಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಕಾಪು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸದ್ದಾರೆ.
- Advertisement -