- Advertisement -
- Advertisement -
ಮಂಗಳೂರು: ನಿನ್ನೆ ನಗರದ ಹೊರವಲಯದ ಗುರುಪುರದಲ್ಲಿ ಗುಡ್ಡ ಕುಸಿದು ಸಾವನ್ನಪ್ಪಿದ ಇಬ್ಬರು ಮಕ್ಕಳ ಕುಟುಂಬಕ್ಕೆ ಸರಕಾರದಿಂದ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.
ಇಂದು ಪರಿಹಾರ ಧನವನ್ನು ಕೋಟ ಶ್ರೀನಿವಾಸ್ ಪೂಜಾರಿ ಅವರು ನೀಡಿದ್ದು, ಈ ವೇಳೆ ಮೂಡಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಉಪಸ್ಥಿತರಿದ್ದರು.
ನಿನ್ನೆ ಗುಡ್ಡ ಕುಸಿತ ಘಟನೆಯಲ್ಲಿ 16 ವರ್ಷದ ಸಫ್ವಾನ್ ಮತ್ತು 10 ವರ್ಷದ ಸಹಲಾ ಮೃತಪಟ್ಟಿದ್ದರು. ತೀವ್ರ ರಕ್ಷಣಾ ಕಾರ್ಯಾಚರಣೆಯ ನಂತರವೂ ಮಕ್ಕಳನ್ನು ಬದುಕಿಸಲು ಆಗಿರಲಿಲ್ಲ.
- Advertisement -