- Advertisement -
- Advertisement -
ಕಡಬ: ಭಜನಾಮಂದಿರದ ಆವರಣದ ತೆಂಗಿನಮರದಿಂದ ತೆಂಗಿನಕಾಯಿ ಕಳ್ಳತನವಾಗಿರುವ ಘಟನೆ ರಾಮಕುಂಜದಲ್ಲಿ ನಡೆದಿದೆ.
ರಾಮಕುಂಜದ ಶಾರದಾಂಬ ಭಜನಾ ಮಂದಿರದಿಂದ ತೆಂಗಿನ ಕಾಯಿ ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಜನಾ ಮಂದಿರದ ರಂಗ ಮಂದಿರದಲ್ಲಿದ್ದ ಸುಮಾರು 100 ತೆಂಗಿನ ಕಾಯಿ ಕಳವಾಗಿದ್ದು ಕಳ್ಳತನ ನಡೆಸಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭಜನಾ ಮಂದಿರದ ಅಧ್ಯಕ್ಷ ಪ್ರದೀಪ್ರವರು ಆಗ್ರಹಿಸಿದ್ದಾರೆ.
- Advertisement -