ಮಂಗಳೂರು: ಮಕ್ಕಳಿಗೆ ರಜೆ ಸಿಕ್ರೆ ಸಾಕು ಅವರಲ್ಲಿ ಅಡಗಿರೋ ಪ್ರತಿಭೆಗಳೆಲ್ಲಾ ತನ್ನಿಂದ ತಾನೇ ಹೊರಗೆ ಬರೋದಕ್ಕೆ ಶುರುವಾಗುತ್ತೆ. ಅದರಲ್ಲೂ ಈ ಕೊರೊನಾ ರಜೆಯಿಂದಾಗಿ ಪುಟಾಣಿಗಳ ಪ್ರತಿಭೆ ಹೇಗೆಲ್ಲಾ ಹೊರಗೆ ಬರ್ತಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಮೂಲಕ ನೀವೆಲ್ಲಾ ನೋಡೇ ಇರ್ತೀರಾ.. ಈಗ ಅಂತಹದ್ದೇ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.
ಹೌದು.. ಮಕ್ಕಳು ಎಲ್ಲಾವನ್ನೂ ಸೂಕ್ಷ್ಮವಾಗಿ ಗಮನಿಸ್ತಾರೆ. ಅವರ ಮುಂದೆ ಏನೇ ಮಾಡ್ಬೇಕಾದ್ರೂ ಹತ್ತು ಬಾರಿ ಯೋಚಿಸಿ ಮಾಡ್ಬೇಕು ಅನ್ನೋದು ಅದಕ್ಕೆ. ನೀವು ಈಗಾಗಲೇ ಮಕ್ಕಳು ಭೂಲ ಕೋಲದ ಸನ್ನಿವೇಶವನ್ನು ಅನುಕರಣೆ ಮಾಡುವ ವಿಡಿಯೋವನ್ನು ನೋಡಿರ್ತೀರಾ.. ಈಗ ಅದೇ ರೀತಿ ಯಕ್ಷಗಾನ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಮಹಿಷಾಸುರನ ಆಗಮನದ ಸನ್ನಿವೇಶವನ್ನು ಮಕ್ಕಳು ಅನುಕರಣೆ ತಮ್ಮದೇ ರೀತಿಯಲ್ಲಿ ಅನುಕರಣೆ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೂವರು ಮಕ್ಕಳು ಸೇರಿಕೊಂಡು ತಮ್ಮದೇ ಕಲ್ಪನೆಯಲ್ಲಿ ಆಡಯತ್ತಿರುವ ಈ ವಿಡಿಯೋ ನೋಡಿದ್ರೆ ಮನಸ್ಸು ರಿಲ್ಯಾಕ್ಸ್ ಆಗೋದಂತೂ ಪಕ್ಕಾ. ಮಕ್ಕಳು ಆ ಪ್ರಸಂಗವನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸಿದ್ದಾರೆ ಅನ್ನೋದಕ್ಕೆ ಈ ವಿಡಿಯೋವೇ ಸಾಕ್ಷಿ.
ಇನ್ನು ಈ ಮಕ್ಕಳು ಕರಾವಳಿ ಭಾಗದವರು ಅನ್ನೋದು ಪಕ್ಕಾ. ಆದ್ರೆ ಎಲ್ಲಿಯವರು ಅನ್ನೋ ಮಾಹಿತಿ ಲಭ್ಯ ವಾಗಿಲ್ಲ. ಆದ್ರೆ ವಿಡಿಯೋ ಭಾರೀ ಮೆಚ್ಚುಗೆ ಪಡಿತಿರೋಂತು ಸತ್ಯ..