- Advertisement -
- Advertisement -
ಚಿಕ್ಕಮಗಳೂರು : ಕೊಳಲು ಕ್ಲಾಸ್ ಗೆ ಸೇರಿಸಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.
ಶೃಂಗೇರಿಯ ಹರಿಹರ ಬೀದಿಯ ಬಿದಿಯಲ್ಲಿ ವಾಸವಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಧ್ರುವ(16) ನೇಣಿಗೆ ಶರಣಾಗಿರುವ ವಿದ್ಯಾರ್ಥಿ.
ಧ್ರುವ ನನ್ನನ್ನು ಕೊಳಲು ಕ್ಲಾಸ್ ಗೆ ಸೇರಿಸಿ ಎಂದು ಪೋಷಕರ ಬಳಿ ತಿಳಿಸಿದ್ದ.ಈ ವೇಳೆ ಪೋಷಕರು ಎಸ್ ಎಸ್ ಎಲ್ ಸಿ ವ್ಯಾಸಂಗ ಮುಗಿದ ನಂತರ ಪೋಷಕರು ಕೊಳಲು ನುಡಿಸುವ ಶಾಲೆಗೆ ಸೇರಿಸುವುದಾಗಿ ಹೇಳಿದ್ದರು. ಇದರಿಂದ ಬೇಸರದಿಂದ ಪರೀಕ್ಷೆಗೆ ಗೈರಾಗಿ ಧ್ರುವ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -