Wednesday, June 24, 2026
Homeಕರಾವಳಿಕಿನ್ನಿಗೋಳಿ: ಕೊನೆಗೂ ಬೋನಿಗೆ ಬಿತ್ತು ಚಿರತೆ !

ಕಿನ್ನಿಗೋಳಿ: ಕೊನೆಗೂ ಬೋನಿಗೆ ಬಿತ್ತು ಚಿರತೆ !

- Advertisement -
- Advertisement -

ಕಟೀಲು -ಕಿನ್ನಿಗೋಳಿ ಸಮೀಪದ ಗುತ್ತಕಾಡುವಿನ ತಾಳಿಪಾಡಿಯಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದು ಸೆರೆಯಾಗಿದೆ.

ಕಿನ್ನಿಗೋಳಿಯ ಹತ್ತಿರ ಹಾಡಹಗಲೇ ಚಿರತೆ ಓಡಾಡುತ್ತಿರುವ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ತಕ್ಷಣ ಅರಣ್ಯಾಧಿಕಾರಿಗಳು ಕಿನ್ನಿಗೋಳಿಯ ತಾಳಿಪಾಡಿಯಲ್ಲಿ ಬೋನು ಇರಿಸಿ ಚಿರತೆಯನ್ನು ಸೆರೆ ಹಿಡಿದು, ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

ಅರಣ್ಯಾಧಿಕಾರಿಗಳ ನಡೆಗೆ ಕಿನ್ನಿಗೋಳಿ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!