- Advertisement -
- Advertisement -
ಕಾಸರಗೋಡು: ಭಾರೀ ಮಳೆಯ ಹಿನ್ನೆಲೆಯಲ್ಲಿ ಚಲಿಸುತ್ತಿದ್ದ ಕಾರು ಹೊಳೆಗೆ ಬಿದ್ದ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.
ಪಳ್ಳಂಜಿ-ಪಾಂಡ್ಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ತಡೆಗೋಡೆ ಇಲ್ಲದ ಕಾರಣ ಸೇತುವೆ ಮೇಲೆ ಚಲಿಸುತ್ತಿದ್ದ ವೇಳೆ ಕಾರು ಹೊಳೆಗೆ ಉರುಳಿದೆ.
ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದ್ದು, ಕಾರು ನೀರು ಪಾಲಾಗಿದೆ.ಕಾರಿನಲ್ಲಿದ್ದ ರಶೀದ್ ಮತ್ತು ತಸ್ರೀಫ್ ಎಂಬುವವರನ್ನು ರಕ್ಷಣೆ ಮಾಡಲಾಗಿದ್ದು, ಹೊಳೆಗೆ ಬಿದ್ದ ಬಳಿಕ ಇಬ್ಬರೂ ಅಡ್ಡಲಾಗಿದ್ದ ಮರವನ್ನು ಹಿಡಿದು ಕೊಂಂಡಿದ್ದು, ನಂತರ ರಕ್ಷಣೆ ಮಾಡಲಾಗಿದೆ.
ಸತತ ಮಳೆಯ ಕಾರಣದಿಂದಾಗಿ ಹೊಳೆ ತುಂಬಿ ಹರಿಯುತ್ತಿದ್ದು, ಅದೃಷ್ಟವಶಾತ್ ಕಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
- Advertisement -